Webdunia - Bharat's app for daily news and videos

Install App

ಬಿಸಿಲಿನ ತಾಪಮಾನ ಹೆಚ್ಚಾದಂತೇ ಬೆಂಗಳೂರಿನಲ್ಲಿ ಎಳೆನೀರಿನ ಬೆಲೆಯೂ ಗಗನಕ್ಕೆ

Krishnaveni K
ಬುಧವಾರ, 26 ಫೆಬ್ರವರಿ 2025 (09:11 IST)
ಬೆಂಗಳೂರು: ರಾಜ್ಯದಲ್ಲಿ ಈಗ ಬಿಸಿಲಿನ ಝಳ ಹೆಚ್ಚಾಗಿದ್ದು, ಬೆಂಗಳೂರಿನಲ್ಲೂ ಬೇಸಿಗೆಕಾಲದ ಧಗೆ ಶುರುವಾಗಿದೆ. ತಾಪಮಾನ ಹೆಚ್ಚಳವಾಗುತ್ತಿದ್ದಂತೇ ಬೆಂಗಳೂರಿನಲ್ಲಿ ಎಳೆನೀರಿನ ಬೆಲೆಯೂ ಗಗನಕ್ಕೇರಿದೆ.

ಬೇಸಿಗೆಕಾಲದಲ್ಲಿ ಎಳೆನೀರು, ಕಲ್ಲಂಗಡಿ ಹಣ್ಣಿನಂತಹ ವಸ್ತುಗಳಿಗೆ ಬೇಡಿಕೆ ಹೆಚ್ಚು. ಬಾಡಿ ಹೀಟ್ ಆಗದಂತೆ ಎಳೆನೀರು ಸೇವನೆ ಮಾಡುವವರ ಸಂಖ್ಯೆ ಹೆಚ್ಚು. ಆದರೆ ಈಗ ರಾಜ್ಯ ರಾಜಧಾನಿಯಲ್ಲಿ ಎಳೆ ನೀರು ಬೆಲೆ ಕೇಳುವಂತೆಯೇ ಇಲ್ಲ.

ಒಂದೆಡೆ ಕಾಯಿ ಬರುವುದು ಕಡಿಮೆಯಾಗಿದ್ದರೆ ಇನ್ನೊಂದೆಡೆ ಬೇಡಿಕೆಯೂ ಹೆಚ್ಚಾಗಿದೆ. ಪರಿಣಾಮ ಉತ್ತಮ ಗುಣಮಟ್ಟದ ಎಳೆನೀರಿನ ಬೆಲೆ 60-70 ರೂ.ಗೆ ತಲುಪಿದೆ. ಕೆಲವೇ ದಿನಗಳ ಹಿಂದೆ 45-50 ರೂ. ಇದ್ದ ಎಳೆನೀರು ಈಗ ಏಕಾಏಕಿ 15-20 ರೂ.ಗೆ ಏರಿಕೆಯಾಗಿದೆ.

ವ್ಯಾಪಾರ ಹೆಚ್ಚಾಗಿದೆ ಆದರೆ ಅದಕ್ಕೆ ತಕ್ಕಷ್ಟು ಕಾಯಿ ಬರುತ್ತಿಲ್ಲ ಎನ್ನುತ್ತಿದ್ದಾರೆ ವ್ಯಾಪಾರಿಗಳು. ಇತ್ತೀಚೆಗೆ ತೆಂಗಿನಕಾಯಿ ಬೆಲೆಯೂ ಹೆಚ್ಚಾಗಿದ್ದನ್ನು ನೀವು ಗಮನಿಸಿರಬಹುದು. ಗುಣಮಟ್ಟದ ತೆಂಗಿನ ಕಾಯಿ ಬರದೇ ಇರುವುದು ಇದಕ್ಕೆ ಕಾರಣವಾಗಿದೆ. ಇದೀಗ ಎಳೆನೀರಿನ ಬೆಲೆಯೂ ಗಗನಕ್ಕೇರಿದೆ.

ಕೆಲವೊಂದು ಕಡೆ ಸಾಧಾರಣ ಗುಣಮಟ್ಟದ ಕಡಿಮೆ ನೀರು ಇರುವ ಎಳೆನೀರು 35-40 ರೂ.ಗೆ ಮಾರಾಟವಾಗುತ್ತಿದೆ. ಆದರೆ ಇದರಲ್ಲಿ ಹೆಚ್ಚು ನೀರು ಇರಲ್ಲ. ಚೆನ್ನಾಗಿ ನೀರು ಇರುವ ಕಾಯಿ ಬೇಕೆಂದರೆ 60 ರೂ.ಗಿಂತ ಕಮ್ಮಿಯಿಲ್ಲ ಎನ್ನುವುದು ಗ್ರಾಹಕರ ಅಳಲು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam ದಾಳಿಯಾದ್ರೂ ಪ್ರವಾಸಿಗರಿಗೆ ಚಿಂತೆಯಿಲ್ಲ: ದಾಳಿ ನಡೆದ ಕಾಶ್ಮೀರಕ್ಕೆ ಪ್ರವಾಸಿಗರ ದಂಡು

Pehalgam attack: ಪಹಲ್ಗಾಮ್ ಉಗ್ರರ ಸಂಚು ಹೇಗಿತ್ತು, ದಾಳಿಗೆ ಮುನ್ನ ಏನು ಮಾಡಿದ್ದರು ಇಲ್ಲಿದೆ ವಿವರ

Arecanut price today: ಅಡಿಕೆ ಬೆಳೆಗಾರರಿಗೆ ಇಂದು ಬಂಪರ್ ಸುದ್ದಿ, ಇಂದಿನ ದರ ಎಷ್ಟಾಗಿದೆ ನೋಡಿ

Gold price today: ಅಕ್ಷಯ ತೃತೀಯಕ್ಕೆ ಮೊದಲು ಚಿನ್ನದ ದರ ಎಷ್ಟಾಗಿದೆ ನೋಡಿ

ಪಾಕಿಸ್ತಾನದಿಂದ ಡ್ರೈ ಫ್ರೂಟ್ಸ್ ಬಂದ್: ಭಾರತದಲ್ಲಿ ಡ್ರೈ ಫ್ರೂಟ್ಸ್ ರೇಟ್ ಜಾಸ್ತಿಯಾಗಲಿದೆ

ಮುಂದಿನ ಸುದ್ದಿ
Show comments