Select Your Language

Notifications

webdunia
webdunia
webdunia
webdunia

ಕಿರುತರೆ ನಟ ರವಿಕಿರಣ್ ವಿರುದ್ದ ವಂಚನೆ ಆರೋಪ. ಠಾಣೆ ಮೆಟ್ಟಿಲೇರಿದ ಕಲಾವಿದರು

crime news

geetha

bangalore , ಮಂಗಳವಾರ, 13 ಫೆಬ್ರವರಿ 2024 (16:30 IST)
ಬೆಂಗಳೂರು-ಕಿರುತರೆ ನಟ ರವಿಕಿರಣ್  ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಹಿರಿಯ ಕಿರುತೆರೆ ಕಲಾವಿದ ರವಿಕಿರಣ್ ವಿರುದ್ಧ  ಟೆಲಿವಿಷನ್  ಕಲ್ಚರಲ್ ಅಂಡ್ ಸ್ಫೋಟ್ಸ್ ಕ್ಲಬ್ ಸದಸ್ಯರು ಸುಬ್ರಮಣ್ಯ ಪುರ ಪೊಲೀಸ್ ಠಾಣೆ‌ ಮೆಟ್ಟಿಲೇರಿದ್ದಾರೆ.
 
ಹಲವು ವರ್ಷಗಳಿಂದ ಕ್ಲಬ್ ನ ಕಾರ್ಯದರ್ಶಿಯಾಗಿರುವ ರವಿಕಿರಣ್  ಕ್ಲಬ್ ನ ಹಣ ಅವ್ಯವಹಾರ ಮಾಡಿದ್ದಾರೆ.ಪ್ರಶ್ನೆ ಮಾಡಿದ್ದಕ್ಕೆ ಇಂದು ಕ್ಲಬ್ ನಲ್ಲಿ  ಗಲಾಟೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.ಕಾರ್ಯದರ್ಶಿ ರವಿಕಿರಣ್ ಹಾಗೂ ಜಂಟಿ ಕಾರ್ಯದರ್ಶಿ ಉಮಾಶಂಕರ್ ಮೇಲೆ ಅಕ್ರಮ ಆರೋಪ ಕೇಳಿ ಬಂದಿದೆ. ಈ ಹಿಂದೆ ಕಿರುತೆರೆ ನಟ ನಟಿಯರಿಗಾಗಿ ಸರ್ಕಾರದಿಂದ ಅನುದಾನ ನೀಡಲಾಗಿತ್ತು. ಕ್ಲಬ್ ಅಭಿವೃದ್ದಿಗೆ 3 ಕೋಟಿ ಹಣ ಹಾಗೂ ಒಂದು ಎಕರೆ ಜಮೀನು ನೀಡಿದ್ರು.
 
ರವಿಕಿರಣ್ ಸ್ವಯಂ ನಿರ್ಣಯದಿಂದ ಕಟ್ಟಡ ಕಟ್ಥಿದ್ದಾರೆ. ಕ್ಲಬ್ ಚುನಾವಣೆ ನಡೆದಿಲ್ಲ.ಸ್ವಯಂ ಘೋಷಿತವಾಗಿ ಕಾರ್ಯದರ್ಶಿ ಎಂದು ಘೋಷಿಸಿಕೊಂಡಿದ್ದಾರೆಂದು ಸದಸ್ಯರು ಆರೋಪಿಸಿ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಸಿಬಿ ಪೊಲೀಸರ ಕಾರ್ಯಾಚರಣೆ