Select Your Language

Notifications

webdunia
webdunia
webdunia
webdunia

ಪಾರ್ಟಿಗೆ ಅಂತಾ ಕರೆಸಿ ತಮನ್ನಾ ಕೊಲೆ

ಪಾರ್ಟಿಗೆ ಅಂತಾ ಕರೆಸಿ ತಮನ್ನಾ ಕೊಲೆ
bangalore , ಗುರುವಾರ, 16 ಮಾರ್ಚ್ 2023 (18:47 IST)
ತಮನ್ನಾ ಮುಗಿಸಲು ಹೊಂಚು ಹಾಕಿದ್ದ ಎಂಟು ಜನ ಹಂತಕರು.ಭಾನುವಾರ ಅಂದ್ರೆ ಮಾರ್ಚ್ 12 ರ ಎರಡು ಗಂಟೆಗೆ ಪಾರ್ಟಿ ಮಾಡೋಣ.ಬೆಂಗಳೂರು ಸುತ್ತೋಣ ಅಂತಾ ಇಂತಿಕಾಬ್ ಮತ್ತು ತಮನ್ನಾಳನ್ನ ಕಲಾಸಿಪಾಳ್ಯದಲ್ಲಿರುವ ಮನೆ ಬಳಿ  ಕರೆಸಿಕೊಂಡಿದ್ದಾರೆ.ತಮನ್ನಾ ಒಬ್ಬಳೇ ಮಹಿಳೆ ಆಗಿದ್ದರಿಂದ ಮತ್ತೋರ್ವ ಮಹಿಳೆ ತರನ್ನು ಎಂಬಾಕೆಯ ಮನೆಗೆ ಕಳಿಸಿದ್ದಾರೆ.ನಂತರ ಪಾರ್ಟಿ ಮುಗಿಸಿ 6 ಗಂಟೆಗೆ ಸರಿಯಾಗಿ ಕುತ್ತಿಗೆ ಹಿಸುಕಿ,ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.ಇದೆಲ್ಲವನ್ನು ತರನ್ನು ಕಣ್ಣಾರೆ ಕಂಡಿದ್ದು,ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾಳೆ.ನಂತರ ರಾತ್ರಿ‌ 11.45 ಕ್ಕೆ ರೈಲ್ವೇ ನಿಲ್ದಾಣದಲ್ಲಿ ಮೃತದೇಹವಿದ್ದ ಡ್ರಮ್  ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದಲ್ಲಿ ಇಟ್ಟು ಬಂದಿದ್ದಾರೆ.

ತಮನ್ನಾ ಮೃತದೇಹವಿದ್ದ ಡ್ರಮ್ ನಲ್ಲಿ ಆರೋಪಿ ಜಮಾಲ್ ನ ಹೆಸರು ಮತ್ತು ವಿಳಾಸ ಇರುವ ಸ್ಟಿಕ್ಕರ್ ಇತ್ತು.ಅದನ್ನೇ ಲೀಡ್ ಮಾಡಿಕೊಂಡ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.ಸದ್ಯ ಮೂವರ ಬಂಧನವಾಗಿದ್ದು,ಉಳಿದ ಐವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.ಸದ್ಯ ಇದೇ ಮಾದರಿಯ ಡ್ರಮ್ ನಲ್ಲಿ ಈ ಹಿಂದೆ ಬೈಯಪ್ಪನಹಳ್ಳಿ ಮತ್ತು ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯರ ಮೃತದೇಹ ಸಿಕ್ಕಿತ್ತು.ಹಾಗಾಗಿ ಇದೊಂದು ಸೀರಿಯಲ್ ಮರ್ಡರ್ ಅನ್ನೋ ಆತಂಕ‌ ಸಿಟಿ ಜನರಲ್ಲಿತ್ತು.ಸದ್ಯ ಆ ಭಯ ದೂರವಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಮ್ ನಲ್ಲಿತ್ತು ಶವ..ಪ್ರಕರಣ ಬೇಧಿಸಿದ ರೈಲ್ವೇ ಪೊಲೀಸರು..!