Select Your Language

Notifications

webdunia
webdunia
webdunia
webdunia

ನಶೆ ಬರುವ ಸಿರಪ್ ಮಾರಾಟ ಆರೋಪಿ ಬಂಧನ

ನಶೆ ಬರುವ ಸಿರಪ್ ಮಾರಾಟ ಆರೋಪಿ ಬಂಧನ
ಬೆಂಗಳೂರು , ಶನಿವಾರ, 8 ಅಕ್ಟೋಬರ್ 2022 (17:04 IST)
ವಿಜಯನಗರದ ಮೆಡಿಕಲ್ ಶಾಪ್‌ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿ ಅಮಾನ್ ಉಲ್ಲಾ, ಇಮ್ರಾನ್ ಎಂಬಾತನಿಂದ ನಿಷೇಧಿತ ಎಸ್ಕೂಪ್ ಹೆಸರಿನ ಸಿರಪ್ ಖರೀದಿ ಮಾಡಿದ್ದ.
ಜೆ.ಪಿ. ನಗರ ಆಕ್ಸ್‌ಫರ್ಡ್ ಗ್ರೌಂಡ್ ಬಳಿ ಯುವಕರಿಗೆ ಮಾರಲು ಯತ್ನಿಸುತ್ತಿದ್ದ. ಈ ವೇಳೆ ಮಾಹಿತಿ ಪಡೆದು ಆರೋಪಿಯನ್ನ ಬಂಧಿಸಿ 356 ಬಾಟಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಎಸ್ಕೂಪ್ ಸಿರಪ್ ನಲ್ಲಿ ಕೊಡೈನ್ ಎಂಬ ಮಾದಕ ವಸ್ತುವಿನ ಅಂಶವಿದ್ದು, ಈ ಸಿರಪ್ ನೋವು ಮತ್ತು ಕೆಮ್ಮಿನ ಚಿಕಿತ್ಸೆಗೆ ಬಳಸಲಾಗುತ್ತದೆ. ಮಾದಕ‌ ಅಂಶ ಇರುವುದರಿಂದ ಈ ಸಿರಪ್ ಅನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಕಡಿಮೆ ಬೆಲೆಗೆ ಸಿಗುವ ಈ ಸಿರಪ್ ನ ಮಾದಕ ವ್ಯಸನಿಗಳು ನಶೆ ಏರಿಸಿಕೊಳ್ಳುತ್ತಾರೆ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಐಕ್ಯತೆಗೆ ಧಕ್ಕೆಯಾಗುವ ಯಾವುದೇ ವಿಷಯಗಳನ್ನು ಪ್ರಸಾರ ಮಾಡಬಾರದು