Select Your Language

Notifications

webdunia
webdunia
webdunia
webdunia

ಧರ್ಮ ಒಡೆಯುವ ಕೆಲಸವನ್ನು ಜನರು ಒಪ್ಪುವುದಿಲ್ಲ ಎಂದ ಸ್ವಾಮೀಜಿ

ಧರ್ಮ ಒಡೆಯುವ ಕೆಲಸವನ್ನು ಜನರು ಒಪ್ಪುವುದಿಲ್ಲ ಎಂದ ಸ್ವಾಮೀಜಿ
ಯಾದಗಿರಿ , ಮಂಗಳವಾರ, 30 ಅಕ್ಟೋಬರ್ 2018 (19:13 IST)
ಧರ್ಮದಲ್ಲಿ ಮೂರನೇ ವ್ಯಕ್ತಿ  ಬಂದು ಧರ್ಮ ಒಡೆಯುವ ಕೆಲಸ ಮಾಡಿದರೆ, ಅದನ್ನು ಜನರು ಒಪ್ಪುವದಿಲ್ಲ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಈಗಾಗಲೇ ಧರ್ಮ ಒಡೆಯುವ ಕೆಲಸ  ಮಾಡಿದವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಧರ್ಮ ಒಡೆಯುವ ಕಾರ್ಯ ಮಾಡಿದರೆ ಸರಿಯಲ್ಲವೆಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಗ್ರಾಮದ ಗವಿಸಿದ್ದೇಶ್ವರ ಧಾರ್ಮಿಕ ಕೇಂದ್ರದಲ್ಲಿ  ಹಮ್ಮಿಕೊಂಡ ಧರ್ಮ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರರೊಂದಿಗೆ ಮಾತನಾಡಿದರು.  ವೀರಶೈವ ಲಿಂಗಾಯತ ಒಂದೇ. ಒಗ್ಗಾಟ್ಟಿಗಿರುತ್ತದೆ. ಉಪಚುನಾವಣೆಯಲ್ಲಿ ಒಂದೇ ಜಾತಿ ಆಧಾರವಾಗಿಟ್ಟುಕೊಂಡು  ಮತದಾರರ  ಸೆಳೆಯುವ ರಾಜಕೀಯ ನಾಯಕರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಜಾತಿ ಮತ ಮುಂದಿಟ್ಟುಕೊಂಡು ಮತ ಕೇಳಬಾರದು ಎಂದು ಕಿವಿ ಮಾತು ಹೇಳಿದರು.

 

 

Share this Story:

Follow Webdunia kannada

ಮುಂದಿನ ಸುದ್ದಿ

ವಿಷಾಹಾರಕ್ಕೆ ಕುರಿಗಳು ಬಲಿ