Daily Horoscope

Select Your Language

Notifications

webdunia
webdunia
webdunia
webdunia

ಮೂವರು ಚುನಾವಣಾಧಿಕಾರಿಗಳ ಅಮಾನತು

ಮೂವರು ಚುನಾವಣಾಧಿಕಾರಿಗಳ ಅಮಾನತು
ಚಿಲುಮೆಯಿಂದ ಅಕ್ರಮ ಡೇಟಾ ಸಂಗ್ರಹ ಆರೋಪ ಸಂಬಂಧ ಮೂವರು ಚುನಾವಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮಹದೇವಪುರ ಕ್ಷೇತ್ರದ ಚಂದ್ರಶೇಖರ್, ಚಿಕ್ಕಪೇಟೆ ಕ್ಷೇತ್ರದ ಭೀಮಾಶಂಕರ್​, ಶಿವಾಜಿನಗರ ಕ್ಷೇತ್ರದ ಸುಹೇಲ್ ಅಹಮದ್​​​ರನ್ನು ಸಸ್ಪೆಂಡ್​​ ಮಾಡಲಾಗಿದೆ. ಕರ್ತವ್ಯ ಲೋಪದ ಮೇಲೆ ಮೂವರನ್ನು ಅಮಾನತು ಮಾಡಲಾಗಿದೆ. BBMP ಮುಖ್ಯ ಆಯುಕ್ತ ತುಷಾರ್​​​ ಗಿರಿನಾಥ್​​​ ಈ ಆದೇಶ ಮಾಡಿದ್ದಾರೆ. ಚಿಲುಮೆ ಸಂಸ್ಥೆ ಪ್ರತಿನಿಧಿಗಳಿಗೆ BOL ಕಾರ್ಡ್ ನೀಡಿ, ಅಕ್ರಮ ಡೇಟಾ ಸಂಗ್ರಹಕ್ಕೆ ಅನುವು ಮಾಡಿಕೊಟ್ಟ ಆರೋಪ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗಿದೆ. ಮೂರು ಕ್ಷೇತ್ರಗಳಿಗೆ ಬೇರೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಕ್ರಮವೇ ನಡೆದಿಲ್ಲವೆಂದು ಸರ್ಕಾರ ವಾದಿಸುತ್ತಿದ್ದು, ಇದೀಗ ಮೂವರು ಅಧಿಕಾರಿಗಳನ್ನು ಯಾಕೆ ಸಸ್ಪೆಂಡ್ ಮಾಡಿದ್ರು ಎಂಬ ಪ್ರಶ್ನೆ ಎದ್ದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರನ ಮೊಬೈಲ್‌ ರಿಟ್ರೀವ್‌ಗೆ ಮುಂದಾದ NIA