Select Your Language

Notifications

webdunia
webdunia
webdunia
webdunia

ಅಮಾನತುಗೊಂಡಿದ ನಂದೀಶ್ ಹೃದಯಾಘಾತದಿಂದ ಸಾವು

p
bangalore , ಗುರುವಾರ, 27 ಅಕ್ಟೋಬರ್ 2022 (19:27 IST)
ರೆಸ್ಟೋರೆಂಟ್ ಒಂದು ಅವಧಿ ಮೀರಿ ಓಪನ್ ಆಗಿದ್ದಕ್ಕೆ  ಕೆ ಆರ್ ಪುರ  ಇನ್ಸ್ಪೆಕ್ಟರ್ ನಂದಿಶ್ ರನ್ನ ಸಸ್ಪೆಂಡ್ ಮಾಡಲಾಗಿತ್ತು. ಇದೇ ನೋವಿನಲ್ಲಿದ್ದ ಇನ್ಸ್ಪೆಕ್ಟರ್ ಹಿರಿಯ ಅಧಿಕಾರಿಗಳಿಗೆ ತನ್ನದೇನು ತಪ್ಪಿಲ್ಲ ನೈಟ್ ರೌಂಡ್ ನಲ್ಲಿದ್ದ ಅಧಿಕಾರಿ ಸಿಬ್ಬಂದಿ ರೆಸ್ಟೋರೆಂಟ್ ಮುಚ್ಚಿಸಿಲ್ಲ ಎಂದು ಮನವಿ ಮಾಡಿದ್ರೂ ಹಿರಿಯ ಅಧಿಕಾರಿಗಳು ನಂದೀಶ್ ಮಾತಿಗೆ ಸೊಪ್ಪು ಹಾಕಿರ್ಲಿಲ್ಲ. ಈ ಕರಾಣಕ್ಕೆ ಕಳೆದ ಒಂದು ವಾರದ ಹಿಂದೆ ಅಮಾನತು ಮಾಡಿ  ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ರು. 
ಇದೇ ನೋವಿನಲ್ಲಿ  ಹಾಸಿಗೆ ಹಿಡಿದಿದ್ದ ನಂದೀಶ್ ಗೆ ಇಂದು ಹೃದಯಾಘಾತವಾಗಿತ್ತು. ಈ ಹಿನ್ನೆಲೆ  ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ರು ಚಿಕಿತ್ಸೆ ಫಲಿಸದೆ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಇನ್ನೂ ಇನ್ಸ್ಪೆಕ್ಟರ್ ನಂದೀಶ್ ಕೆಆರ್ ಪುರ ಪೋಸ್ಟಿಂಗ್ ಪಡೆಯಲು ಸಾಕಷ್ಟು ಶ್ರಮವಹಿಸಿದ್ರು.‌ ಇನ್ನೂ ನಂದೀಶ್ ಗೆ ಎರಡೂ ಚಿಕ್ಕ ಚಿಕ್ಕ ಹೆಣ್ಣುಮಕ್ಕಳಿದ್ದು. ರೂಲ್ 7 ಅಥವಾ ವಾರ್ನ್ ಮಾಡಿ ಬಿಡಬಹುದಾದ ಕೇಸ್ ಸಸ್ಪೆಂಡ್ ಮಾಡಿದ್ದು ಎಷ್ಟು ಸರಿ ಅಂತ ಪೊಲೀಸ್ರೆ ಮಾತನಾಡಿ ಕೊಳ್ಳುತ್ತಿದ್ದು. ಈ ಸಾವಿಗೆ ಕಾರಣ ಯಾರು? ಯಾರನ್ನ ಹೊಣೆ ಮಾಡಬೇಕು ಎಂದು ಪ್ರಶ್ನೆ ಎತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿ ಸೋಮಣ್ಣ ವಜಾ ಗೊಳಿಸುವಂತೆ ಆಗ್ರಹ.!