Select Your Language

Notifications

webdunia
webdunia
webdunia
webdunia

10 ಕೋಟಿ ರೂ ವೆಚ್ಚದ ಶಿಲ್ಪಕಲಾ ಕೇಂದ್ರ: ಸಚಿವ ಸುನಿಲ್ ಕುಮಾರ್

10 ಕೋಟಿ ರೂ ವೆಚ್ಚದ ಶಿಲ್ಪಕಲಾ ಕೇಂದ್ರ: ಸಚಿವ ಸುನಿಲ್ ಕುಮಾರ್
kolara , ಶನಿವಾರ, 18 ಸೆಪ್ಟಂಬರ್ 2021 (21:01 IST)
ಬೆಂಗಳೂರು: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಶಿವಾರಪಟ್ಟಣ ಪ್ರದೇಶದ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರವನ್ನು ಹತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ, ಇದರ ಉದ್ದೇಶಕ್ಕಾಗಿ ನಾಲ್ಕು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಹೇಳಿದರು.
 
ಶುಕ್ರವಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ವಿಶ್ವಕರ್ಮ ಜಯಂತಿ ಉದ್ಘಾಟನೆ ಮಾಡಿ ಮಾಲೂರಿನ ಶಿವಾರಪಟ್ಟಣದಲ್ಲಿ ನಾಲ್ಕು ಏಕರೆ ಜಾಗದಲ್ಲಿ ಶಿಲ್ಪಕಲಾ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ, ಇದು ಕುಶಲಕರ್ಮಿಗಳಿಗೆ ನೆರವು ನೀಡುತ್ತಿದೆ ಎಂದು ಹೇಳುತ್ತಾರೆ
 
ಭಗವಾನ್ ವಿಶ್ವಕರ್ಮ ಈ ಜಗತ್ತಿನ ಮೊಟ್ಟಮೊದಲ ಇಂಜಿನಿಯರ್ ಎಂದು ಬಣ್ಣಿಸಿದ ಸಚಿವ ಸುನಿಲ್ ಕುಮಾರ್  ರಾಮಾಯಣ ಮತ್ತು ಮಹಾಭಾರತದಲ್ಲು ವಿಶ್ವಕರ್ಮರ ಉಲ್ಲೇಖವಿದೆ ಪಾಂಡವರಿಗಾಗಿ ಇಂದ್ರಪ್ರಸ್ಥ ವನ್ನು ನಿರ್ಮಾಣ ಮಾಡಿದ್ದು, ದ್ವಾರಕ್ಕೆ ನಗರ ನಿರ್ಮಾಣ ಮಾಡಿದ್ದು ಹಾಗೂ ಸ್ವರ್ಣವಲ್ಲಿ ಲಂಕೆಯ ನಿರ್ಮಾತೃ ಕೂಡ ವಿಶ್ವಕರ್ಮರ ಎಂದು ನಮ್ಮ ಪೌರಾಣಿಕ ಐತಿಹ್ಯ ತಿಳಿಸುತ್ತದೆ ಎಂದರು.
 
ಹಿಂದುಳಿದ ಅನೇಕ ಸಣ್ಣ ,ಸಣ್ಣ ಸಮುದಾಯಗಳು ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬೆಳೆಯಬೇಕು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಸಶಕ್ತ ವಾಗಬೇಕಾದರೆ ಎಲ್ಲಾ ಹಿಂದುಳಿದ ಸಣ್ಣ ಸಮುದಾಯಗಳು ಒಗ್ಗೂಡಿ ಕೆಲಸ ಮಾಡಬೇಕು. ಅದರಲ್ಲಿಯೂ ವಿಶೇಷವಾಗಿ ವಿಶ್ವಕರ್ಮ ಸಮುದಾಯ ತನ್ನ ವೃತ್ತಿಪರತೆ, ಸರಳತೆ ಮತ್ತು ಕರ್ತವ್ಯ ನಿಷ್ಠೆಗೆ ಹೆಸರಾಗಿದೆ ಈ ಸಮುದಾಯ ತನ್ನ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಸಾಗಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
 
ಎಲ್ಲಾ ಮಹನೀಯರ ಜಯಂತಿಗಳ ಉದ್ದೇಶ ಆಯ ಮಹಾಪುರುಷರು ಪಾಲಿಸಿದ ಜೀವನದರ್ಶನಗಳ ಜೀವನ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು ಮತ್ತು ಅದರ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಜಯಂತಿಗಳನ್ನು ವಿಶೇಷ ಮುತುವರ್ಜಿಯಿಂದ ಮಾಡಲಾಗುತ್ತಿದೆ.
 
ಸಮಾರಂಭದಲ್ಲಿ ನಿಟ್ಟರಹಳ್ಳಿ ರಾಮಚಂದ್ರ ಸ್ವಾಮೀಜಿ, ಪರಮಪೂಜ್ಯ ನೀಲಕಂಠ ಚಾರ್ಯ ಮಹಾಸ್ವಾಮಿ, ಜಗನ್ನಾಥ ಮಹಾಸ್ವಾಮಿ, ರಾಜೇಂದ್ರ ಸ್ವಾಮಿ, ವಿಶ್ವಕರ್ಮ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಬಾಬು ಪತ್ತಾರ್, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ, ವಿಶ್ವಕರ್ಮ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಸುಮಿತ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಾಹಕ ಹುದ್ದೆ.
ಕೋಲಾರ

Share this Story:

Follow Webdunia kannada

ಮುಂದಿನ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ಮಹತ್ತರ ಬೆಳವಣಿಗೆ