Webdunia - Bharat's app for daily news and videos

Install App

ಪಕ್ಕಾ ಪ್ಲಾನ್ ಪ್ರಕಾರ ನಡೆದಿದ್ದರೆ ಗೌರಿ ಲಂಕೇಶ್ ಗೂ ಮೊದಲೇ ಸುನಿಲ್ ಹತ್ಯೆಯಾಗಬೇಕಿತ್ತು!

Webdunia
ಶನಿವಾರ, 9 ಡಿಸೆಂಬರ್ 2017 (08:10 IST)
ಬೆಂಗಳೂರು: ಪಕ್ಕಾ ಯೋಜನೆ ಪ್ರಕಾರ ಎಲ್ಲವೂ ನಡೆದಿದ್ದರೆ ವಿಚಾರವಾದಿ, ಪತ್ರಕರ್ತೆ ಗೌರಿ
ಲಂಕೇಶ್ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಕ್ಕಿಂತ ಮೊದಲೇ ಸುನಿಲ್ ಹೆಗ್ಗರವಳ್ಳಿ ಹತ್ಯೆಯಾಗಬೇಕಿತ್ತು.
 

ಆದರೆ ಸುನಿಲ್ ಅದೃಷ್ಟವೋ ಏನೋ ಎಂಬಂತೆ ಎರಡು ಬಾರಿ ಯೋಜನೆ ತಲೆ ಕೆಳಗಾಗಿ ಸುನಿಲ್ ಬಚವಾಗಿದ್ದರು. ಸುಪಾರಿ ಪಡೆದಿದ್ದ ಶಶಿಧರ್ ಆಗಸ್ಟ್ ತಿಂಗಳಲ್ಲೇ ಸುನಿಲ್ ಮನೆ ಸುತ್ತ ಮುತ್ತ ಸುಳಿದಾಡಿ ಹತ್ಯೆ ಸಂಚು ರೂಪಿಸಿದ್ದನಂತೆ.

ಆದರೆ ಮನೆಯ ಮುಂದೆ ಸಿಸಿಟಿವಿ ಕ್ಯಾಮರಾಗಳನ್ನು ನೋಡಿ ಸಿಕ್ಕಿ ಬೀಳಬಹುದೆಂಬ ಭಯದಿಂದ ಕೊಲ್ಲಲೆಂದು ಬಂದವನು ಬರಿಗೈಯಲ್ಲಿ ವಾಪಸಾಗಿದ್ದ ಎಂದು ಸುನಿಲ್ ಹೆಗ್ಗರವಳ್ಳಿ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಗೌರಿ ಹತ್ಯೆಯಾಗಿದ್ದು ಸೆಪ್ಟೆಂಬರ್ 5 ರಂದು. ಒಂದು ವೇಳೆ ಸುಪಾರಿ ಕಿಲ್ಲರ್ ಶಶಿಧರ್ ಯೋಜನೆ ಪಕ್ಕಾ ಆಗಿ ಕೆಲಸ ಮಾಡಿದ್ದರೆ ಆಗಸ್ಟ್ 28 ರಂದೇ ಸುನಿಲ್ ಹತ್ಯೆಯಾಗಿರುತ್ತಿತ್ತು. ನನ್ನ ಪುಣ್ಯವೋ, ತಂದೆ ತಾಯಿಯ ಆಶೀರ್ವಾದವೋ ಬದುಕುಳಿದಿದ್ದೆ ಎಂದು ಸುನಿಲ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments