ಸುಮಲತಾಗೆ ಜೈ ಎಂದ ಪ್ರಬಲ ಕೈ ನಾಯಕ

Webdunia
ಬುಧವಾರ, 27 ಮಾರ್ಚ್ 2019 (20:15 IST)
ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಹೆಚ್. ಬಿ. ರಾಮು ಮಂಡ್ಯದಲ್ಲಿ ಸುಮಲತಾ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಸುಮಲತಾಗೆ ಜೈ ಎಂದ ಹೆಚ್. ಬಿ. ರಾಮು ನಡೆ ಕುತೂಹಲ ಮೂಡಿಸಿದೆ.

ಚಲುವರಾಯಸ್ವಾಮಿ ಬಣದಲ್ಲಿ ಗುರುತಿಸಿಕೊಂಡಿರೋ ಮಾಜಿ ಶಾಸಕ ರಾಮು ಮಾತನಾಡಿದ್ದು, ಮುಖ್ಯಮಂತ್ರಿಗಳೇ ಚಲುವರಾಯಸ್ವಾಮಿ ಬೆಂಬಲ ಬೇಡ ಅಂತಾ ಹೇಳಿದ್ದಾರೆ. ಈ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮತದಾರರು ಸುಮಲತಾರೇ ನಮ್ಮ ಅಭ್ಯರ್ಥಿ ಅಂತಾ ಘೋಷಣೆ ಮಾಡಿಕೊಂಡಿದ್ದಾರೆ. ನಾವು ಸುಮಲತಾ ಪರ ಕೆಲಸ ಮಾಡುತ್ತೇವೆ ಎಂದರು.

ಎಸ್. ಡಿ. ಜಯರಾಂ ನಮ್ಮ ನಾಯಕರು, ಅವರ ನಂತರ ಅಂಬರೀಶ್, ಅಂಬಿ ಋಣ ನಮ್ಮ ಮೇಲಿದೆ, ಮೂರು ಬಾರಿ ಪಕ್ಷದಿಂದ ಬಿ ಫಾರಂ ಕೊಡಿಸಿದ್ದಾರೆ. ನಾನು ಸುಮಲತಾ ಅಂಬರೀಶ್ ಪರ ಕೆಲ್ಸ ಮಾಡ್ತೀವಿ ಎಂದರು.

ನೂರಕ್ಕೆ ತೊಂಬತ್ತೈದಕ್ಕೂ ಹೆಚ್ಚು ಕಾರ್ಯಕರ್ತರು ಸುಮಲತಾ ಪರ ಇದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್ ಜೊತೆ ಮತ್ತೊಂದು ಬಾರಿ ವಿಚಾರ ವಿನಿಮಯ ಮಾಡ್ತೀವಿ ಎಂದ ಅವರು, ಈ ಜಿಲ್ಲೆಯನ್ನು ಸಾಹುಕಾರ್ ಚನ್ನಯ್ಯರಿಂದ ಹಿಡಿದು ಅಂಬರೀಶ್ ಅವರ ತನಕ ಆಡಳಿತ ನಡೆಸಿದ್ದಾರೆ. ಪಕ್ಕದ ಜಿಲ್ಲೆಯ ಯುವಕನಿಗೆ ಯಾವರೀತಿ ಕೆಲ್ಸ ಮಾಡ್ಲೀ ನಿವೇ ಹೇಳಿ ಎಂದ್ರು. ಜಿಲ್ಲೆಯ ಸ್ವಾಭಿಮಾನ ಏನಾಗ್ಬೇಕು? ಎಂದು ಪ್ರಶ್ನೆ ಮಾಡಿದ್ರು.

ಸಾತನೂರಿಗೆ ಮೊದಲು ದೇವೇಗೌಡ್ರು ಎಂಟ್ರಿ ಕೊಟ್ರು ಈಗ ಇಡೀ ಜಿಲ್ಲೆಯ ವಾತಾವರಣ ಯಾವ ರೀತಿ ಇದೆ ಎಂದ ಅವರು, ಬಿ.ಎಸ್.ಯಡಿಯೂರಪ್ಪ ಜನ್ಮಭೂಮಿ ಮಂಡ್ಯ. ಆದ್ರಿಂದ ಅವರು ಸುಮಲತಾ ಬೆಂಬಲಿಸಿ ಒಳ್ಳೆ ತೀರ್ಮಾನ ಮಾಡಿದ್ದಾರೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ವೀಟ್ ಖರೀದಿಸಿದ ರಾಹುಲ್ ಗಾಂಧಿಗೆ ಶಾಕಿಂಗ್ ಬೇಡಿಕೆಯಿಟ್ಟ ಅಂಗಡಿ ಮಾಲೀಕ

ನಕ್ಸಲಿಸಂ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಉತ್ತರ

ಪತ್ನಿ ಕೃತಿಕಾ ರೆಡ್ಡಿ ಹತ್ಯೆ ಬಗ್ಗೆ ಕೊನೆಗೂ ಸ್ಪೋಟಕ ಸತ್ಯ ಬಾಯ್ಬಿಟ್ಟ ಡಾ ಮಹೇಂದ್ರ ರೆಡ್ಡಿ

ಓಲಾ ಕಂಪೆನಿ ಎಂಜಿನಿಯರ್ ಅನುಮಾನಸ್ಪದ ಸಾವು, 28ಪುಟಗಳ ಡೆತ್‌ನೋಟ್‌ನಲ್ಲಿತ್ತು ಶಾಕಿಂಗ್ ಸಂಗತಿ

ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿಗೆ ಈ ಕೆಲಸ ಮಾಡಲು ಮರೆಯದ ನರೇಂದ್ರ ಮೋದಿ

ಮುಂದಿನ ಸುದ್ದಿ
Show comments