Select Your Language

Notifications

webdunia
webdunia
webdunia
webdunia

ಸುಮಲತಾಗೆ ಮಾಹಿತಿ ಕೊರತೆ: ಜೆಡಿಎಸ್ ಶಾಸಕ ಜಿಟಿ ದೇವೇಗೌಡ

ಸುಮಲತಾಗೆ ಮಾಹಿತಿ ಕೊರತೆ: ಜೆಡಿಎಸ್ ಶಾಸಕ ಜಿಟಿ ದೇವೇಗೌಡ
bangalore , ಮಂಗಳವಾರ, 6 ಜುಲೈ 2021 (19:12 IST)
ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿರುವ ವಿಚಾರದಲ್ಲಿ ಸುಮಲತಾ ಅವರಿಗೆ ಮಾಹಿತಿ ಕೊರತೆ ಇದೆ. ಸಂಸದೆಯಾಗಿ ಮಾಹಿತಿ ಪಡೆದು ಮಾತನಾಡಬೇಕಿತ್ತು ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ ಎಸ್ ಅಣೆಕಟ್ಟಿನ ಸುತ್ತಮುತ್ತ ಗಣಿಕಾರಿಕೆ ದಶಕಗಳಿಂದ ನಡೆಯುತ್ತಿದೆ. ಅದನ್ನು ತಡೆಗಟ್ಟುವ ಕೂಗು ದಶಕಗಳಿಂದ ಕೇಳಿ ಬರುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ನೀರಾವರಿ ತಜ್ಞರ ಸಮಿತಿ ರಚಿಸಿ ಅದರ ಶಿಫಾರಸ್ಸಿನಂತೆ ಕ್ರಮ ಕೈಗೊಳ್ಲಬೇಕು ಎಂದು ಅವರು ಆಗ್ರಹಿಸಿದರು.
ಸುಮಲತಾ ಅವರ ಬಗ್ಗೆ ಕುಮಾರಸ್ವಾಮಿಯವರ ಹೇಳಿಕೆ ತಪ್ಪಲ್ಲ. ಅದು ಆಡು ಭಾಷೆಯಾಗಿತ್ತು. ಮಾಹಿತಿ ತೆಗೆದುಕೊಂಡು ಮಾತನಾಡಿ ಎಂದು ಹೆಚ್ಡಿಕೆ ಹೇಳಬಹುದಿತ್ತು ಎಂದು ಪರೋಕ್ಷವಾಗಿ ಕುಮಾರ ಸ್ವಾಮಿಯನ್ನು ಜಿ.ಟಿ. ದೇವೇಗೌಡ ಬೆಂಬಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 8ಕ್ಕೆ ಕೇಂದ್ರ ಸಂಪುಟ ಪುನರಚನೆ: ರಾಜ್ಯದ ಮೂವರಿಗೆ ಮಣೆ?