Select Your Language

Notifications

webdunia
webdunia
webdunia
webdunia

ಜುಲೈ 8ಕ್ಕೆ ಕೇಂದ್ರ ಸಂಪುಟ ಪುನರಚನೆ: ರಾಜ್ಯದ ಮೂವರಿಗೆ ಮಣೆ?

ಜುಲೈ 8ಕ್ಕೆ ಕೇಂದ್ರ ಸಂಪುಟ ಪುನರಚನೆ: ರಾಜ್ಯದ ಮೂವರಿಗೆ ಮಣೆ?
bangalore , ಮಂಗಳವಾರ, 6 ಜುಲೈ 2021 (14:25 IST)
ಭಾರೀ ಕುತೂಹಲ ಮೂಡಿಸಿರುವ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಜುಲೈ 8ರಂದು  ಬೆಳಿಗ್ಗೆ 10:30ಕ್ಕೆ ನಡೆಯಲಿದೆ.
ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಪುನರಚನೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು, ಕರ್ನಾಟಕದ 3 ಮಂದಿ ಸಂಸದರಿಗೆ ಸ್ಥಾನ ದೊರೆಯುವುದು ಬಹುತೇಕ ಖಚಿತವಾಗಿದೆ.
ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಕುಟುಂಬ ಸಮೇತ ದೆಹಲಿಯತ್ತ ಪ್ರಯಾಣ ಬೆಳೆಸಿದ್ದು, ಮೋದಿ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಕ್ಕಲಿಗ, ವೀರಶೈವ-ಲಿಂಗಾಯತ, ದಲಿತ ಮೂರು ಸಮುದಾಯ ತಲಾ ಒಬ್ಬರನ್ನು ಕ್ಯಾಬಿನೆಟ್ ಸೇರ್ಪಡೆಗೆ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಮಾಡಿದೆ ಎನ್ನಲಾಗಿದ್ದು, ಒಕ್ಕಲಿಗ ಸಮುದಾಯದಿಂದ ರೇಸ್ನಲ್ಲಿ ಶೋಭಾ ಕರಂದ್ಲಾಜೆ, ಪ್ರತಾಪ್ಸಿಂಹ, ವೀರಶೈವ-ಲಿಂಗಾಯತ ಸಮುದಾಯದಿಂದ ರೇಸ್ನಲ್ಲಿ ಬಿ.ವೈ.ರಾಘವೇಂದ್ರ, ಶಿವಕುಮಾರ್ ಉದಾಸಿ ಹಾಗೂ ಪಿ.ಸಿ. ಗದ್ದೀಗೌಡರ್ ಮತ್ತು ದಲಿತ ಸಮುದಾಯದಿಂದ ಎ. ನಾರಾಯಣಸ್ವಾಮಿ ಸ್ಪರ್ಧೆಯಲ್ಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಷೇರು ವಹಿವಾಟಿನ ಸ್ಟಾರ್ಟ್‌ಅಪ್‌ ಹೆವೆನ್‌ಸ್ಪೈರ್‌ನ ಯಶೋಗಾಥೆ