Select Your Language

Notifications

webdunia
webdunia
webdunia
webdunia

ಸುಳ್ವಾಡಿ ಪ್ರಕರಣ: ಆರೋಪಿಗಳ ಪರ ವಕಾಲತ್ತು ವಹಿಸದಿರಲು ವಕೀಲರ ತೀರ್ಮಾನ

ವಿಷಾಹಾರ
ಚಾಮರಾಜನಗರ , ಸೋಮವಾರ, 17 ಡಿಸೆಂಬರ್ 2018 (18:29 IST)
ಸುಳ್ವಾಡಿ ವಿಷಾಹಾರ ಸೇವನೆ ಪ್ರಕರಣದ ಆರೋಪಿಗಳ ಪರ ವಕಾಲತ್ತು ವಹಿಸದಿರುವಂತೆ  ವಕೀಲರ ಸಂಘ ತೀರ್ಮಾನ ತೆಗೆದುಕೊಂಡಿದೆ.

ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮನ ಪ್ರಸಾದದಲ್ಲಿ ವಿಷ ಹಾಕಿದ ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ. ಹೀಗಂತ ಇಂದು ಚಾಮರಾಜನಗರದಲ್ಲಿ ಜಿಲ್ಲಾ ವಕೀಲರ ಸಂಘ ತೀರ್ಮಾನ ತೆಗೆದುಕೊಂಡಿದೆ.

ವಿಷಾಹಾರ ಸೇವಿಸಿ ಮೃತಪಟ್ಟ ಭಕ್ತರಿಗೆ ಶ್ರದ್ದಾಂಜಲಿ ಅರ್ಪಿಸಿದ ಬಾರ್ ಅಸೋಸಿಯೇಷನ್ ಸದಸ್ಯರು,  ಎರಡು ನಿಮಿಷ ಮೌನಾಚರಣೆ ನಂತರ ಒಂದು ದಿನ ಕಲಾಪದಿಂದ ಹೊರಗುಳಿದರು.

ಇದೊಂದು ಅಮಾನವೀಯ ಘಟನೆ ಹಾಗೂ ವಿಶೇಷ ಪ್ರಕರಣ ಎಂದು ಪರಿಗಣಿಸಿದ ವಕೀಲರು, ಆರೋಪಿಗಳ ಪರ ವಕಾಲತ್ತು ವಹಿಸದೇ ಇರಲು ತೀರ್ಮಾನ ಮಾಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅಂಬಾನಿ ಜತೆ ಸಚಿವ ಡಿಕೆಶಿ!