Select Your Language

Notifications

webdunia
webdunia
webdunia
webdunia

ಮೃತ ಯೋಧನ ಕುಟುಂಬಕ್ಕೆ ನೆರವಾದ ಸುಧಾಮೂರ್ತಿ

ಮೃತ ಯೋಧನ ಕುಟುಂಬಕ್ಕೆ ನೆರವಾದ ಸುಧಾಮೂರ್ತಿ
ಮೈಸೂರು , ಮಂಗಳವಾರ, 16 ಅಕ್ಟೋಬರ್ 2018 (16:09 IST)
ಮೃತಯೋಧನೊಬ್ಬನ ಕುಟುಂಬಕ್ಕೆ ಸುಧಾಮೂರ್ತಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ. 
ಮೃತ ಯೋಧನ ಕುಟುಂಬಕ್ಕೆ ಸುಧಾಮೂರ್ತಿ ನೆರವಿನ ಚೆಕ್ ವಿತರಣೆ ಮಾಡಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಮೃತ ಸೈನಿಕರ ಕುಟುಂಬದವರು ಸುಧಾಮೂರ್ತಿ ಅವರದು ತಾಯಿ‌ ಹೃದಯ.  
ನಮ್ಮನ್ನು ಯಾರೂ ಸಹ ಪರಿಗಣಿಸದ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬಂದಿದ್ದಾರೆ. ನಮ್ಮ ಮನೆಯವರ ಕಳೆದುಕೊಂಡಿದ್ದಕ್ಕೆ ನಮಗೆ ನೆರವು ನೀಡಿದ್ದಾರೆ.

ನಮ್ಮ ಹಾಗೇ ಸೇನೆ ಸೇರಿ ಪುತ್ರ, ಪತ್ನಿಯರನ್ನ ಕಳೆದುಕೊಂಡವರು ಬಹಳ ಇದ್ದಾರೆ. ಎಲ್ಲಾ ನೊಂದ ಮೃತ ಸೈನಿಕರಿಗೆ ಅವರು ನೆರವು ನೀಡಲಿ ಎಂದರು. ಕುಟುಂಬಸ್ಥರು ಸುಧಾಮೂರ್ತಿ ಅವರಿಗೆ ಧನ್ಯವಾದ ತಿಳಿಸಿದರು.

 ಈ ಸಂದರ್ಭದಲ್ಲಿ ಹಾಜರಿದ್ದ ಸಂಸದ ಪ್ರತಾಪ್ ಸಿಂಹ, ಸಚಿವ ಸಾರಾ ಮಹೇಶ್, ಡಿಸಿ ಅಭಿರಾಮ್ ಜಿ. ಶಂಕರ್, ಮಾಜಿ ‌ಮೇಯರ್ ರವಿ ಕೈಯಲ್ಲಿ ಚೆಕ್ ಗಳನ್ನು ನೀಡುವ ಮೂಲಕ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.




Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್, ಖರ್ಗೆ ವಿರುದ್ಧ ಚಿಂಚನಸೂರ ವಾಗ್ದಾಳಿ