Select Your Language

Notifications

webdunia
webdunia
webdunia
webdunia

ದೇವಿ ಜಾತ್ರೆ ಮುಗಿಸಿ ಬರುವಾಗಲೇ ನಡೆದಿದೆ ಇಂತಹ ದುರಂತ

ದೇವಿ ಜಾತ್ರೆ ಮುಗಿಸಿ ಬರುವಾಗಲೇ ನಡೆದಿದೆ ಇಂತಹ ದುರಂತ
ಗದಗ , ಮಂಗಳವಾರ, 11 ಫೆಬ್ರವರಿ 2020 (06:52 IST)
ಗದಗ : ದೇವಿ ಜಾತ್ರೆ ಮುಗಿಸಿ ಬರುತ್ತಿದ್ದ ವೇಳೆ ಬೊಲೆರೋ ವಾಹನ ಮೈಮೇಲೆ ಹರಿದ ಪರಿಣಾಮ ಇಬ್ಬರು ಬಾಲಕರು ಮೃತಪಟ್ಟ ಘಟನೆ ಶಿರಹಟ್ಟಿ ತಾಲೂಕಿನ ಶ್ರೀಮಂತಗಡ ಬಳಿ ನಡೆದಿದೆ.


ಸಂದೀಪ್(12) ಹಾಗೂ ಮಾರುತಿ(10) ಮೃತಪಟ್ಟ ಬಾಲಕರು. ಇವರು ಶ್ರೀಮಂತಗಡ ಹೊಳಲಮ್ಮದೇವಿ ಜಾತ್ರೆ ಮುಗಿಸಿಕೊಂಡು ಇಳಿಜಾರು ಪ್ರದೇಶದಲ್ಲಿ ಬರುತ್ತಿರುವಾಗ ಹಿಂದಿನಿಂದ ವೇಗವಾಗಿ ಬಂದ ಬೊಲೆರೋ ನಿಯಂತ್ರಣ ತಪ್ಪಿ ಬಾಲಕರ ಮೈಮೇಲೆ ಹರಿದು ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಒಬ್ಬ ಬಾಲಕ ಸ್ಥಳದಲ್ಲೇ ಸಾವನಪ್ಪಿದ್ದರೆ ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನಪ್ಪಿದ್ದಾನೆ.


ಈ ಘಟನೆಗೆ ಸಂಬಂಧಿಸಿದಂತೆ ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಬೊಲೆರೊ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬೆಳ್ಳಿ, ಚಿನ್ನದ ಬೆಲೆಯೆಷ್ಟು ಗೊತ್ತಾ?