Select Your Language

Notifications

webdunia
webdunia
webdunia
webdunia

ಸುಭಾಹು ಆ್ಯಪ್ ವಿಸ್ತರಣೆ: ಏನಿದು ಗೊತ್ತಾ?

ಸುಭಾಹು ಆ್ಯಪ್ ವಿಸ್ತರಣೆ: ಏನಿದು ಗೊತ್ತಾ?
ಚಾಮರಾಜನಗರ , ಗುರುವಾರ, 24 ಜನವರಿ 2019 (18:59 IST)
ಸುಭಾಹು ಆ್ಯಪ್ ಅನ್ನು  ಜಿಲ್ಲಾವ್ಯಾಪ್ತಿಗೆ ವಿಸ್ತರಣೆ ಮಾಡಲು ಚಾಲನೆ ನೀಡಲಾಯಿತು.

ಚಾಮರಾಜನಗರದ ಎಸ್ಪಿ ಕಛೇರಿಯಲ್ಲಿ ಸುಭಾಹು ಆ್ಯಪ್ ಅನ್ನು  ಜಿಲ್ಲಾವ್ಯಾಪ್ತಿಗೆ ವಿಸ್ತರಣೆ ಚಾಲನೆ ಮಾಡಲಾಯಿತು.
ಐಜಿಪಿ ಶರತ್ ಚಂದ್ರ ಅವರು ಆ್ಯಪ್ ಅನ್ನು ಜಿಲ್ಲಾ ಮಟ್ಟದ ಠಾಣೆಗಳಿಗೆ ವಿಸ್ತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಇದರಿಂದ ಜಿಲ್ಲೆಯಲ್ಲಿ ಕಳ್ಳತನದ ಪ್ರಕರಣಗಳು ಕಡಿಮೆಯಾಗಿವೆ. ರಾತ್ರಿವೇಳೆಯ ಗಸ್ತು ವ್ಯವಸ್ಥೆಗೆ ಪರಿಣಾಮಕಾರಿಯಾಗಿರುತ್ತೆ ಹಾಗೂ ಉತ್ತಮವಾಗಿರುತ್ತೆ. ಸಿಬ್ಬಂದಿ ಗಸ್ತು ಮಾಡಿರುವುದರ ಬಗ್ಗೆಯೂ ಕ್ಷಣಾರ್ಧದಲ್ಲಿ ತಿಳಿಯಬಹುದು. ರೌಡಿ ಆಸಾಮಿಗಳ ಚಲನವಲನದ ಮೇಲೂ ಸಹ ಸೂಕ್ತ ನಿಗಾವಹಿಸಲು ಅನುಕೂಲಕರವಾಗಿರುತ್ತದೆ ಎಂದು ಅವರು ಹೇಳಿದರು.

ಈ ಒಂದು ತಂತ್ರಾಂಶದ ಬಳಕೆಯಿಂದಾಗಿ ಸಾರ್ವಜನಿಕರಲ್ಲೂ ಸಹ ಇಲಾಖೆಯ ಬಗ್ಗೆ ವಿಶ್ವಾಸ ಮೂಡುತ್ತದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಕಾಡಂಚಿನ ಶಾಲೆಗೆ ನಿತ್ಯೋತ್ಸವ ಕವಿ ಭೇಟಿ