Select Your Language

Notifications

webdunia
webdunia
webdunia
webdunia

ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ, ಹೋರಾಟ ಮಾಡೋದು ನೌಕರರ ಹಕ್ಕು: ರಾಮಲಿಂಗಾ ರೆಡ್ಡಿ

ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ, ಹೋರಾಟ ಮಾಡೋದು ನೌಕರರ ಹಕ್ಕು: ರಾಮಲಿಂಗಾ ರೆಡ್ಡಿ
ವಿಜಯನಗರ , ಸೋಮವಾರ, 11 ಸೆಪ್ಟಂಬರ್ 2023 (08:35 IST)
ವಿಜಯನಗರ : ಖಾಸಗಿ ಸಾರಿಗೆ ಸಂಸ್ಥೆಯವರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ, ಹೋರಾಟ ಮಾಡೋದು ಅವರ ಹಕ್ಕು, ಮಾಡಲಿ ಎಂದು ಸೋಮವಾರ ನಡೆಯಲಿರುವ ಖಾಸಗಿ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
 
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ಖಾಸಗಿ ಸಾರಿಗೆ ನೌಕರರ ಹಲವಾರು ಬೇಡಿಕೆಗಳು ಇವೆ. ಸುಮಾರು 20-22 ಬೇಡಿಕೆಗಳಿವೆ. ಅದರಲ್ಲಿ 2 ಪ್ರಮುಖವಾಗಿವೆ. ಶಕ್ತಿ ಯೋಜನೆ ವಿಚಾರದಲ್ಲಿ ಅವರ ಬೇಡಿಕೆ ಇದೆ. ಎರಡನೆಯದು ಸ್ವಲ್ಪ ಟ್ಯಾಕ್ಸ್ ಹೆಚ್ಚಳವಾಗಿರೋದು ಎಂದು ತಿಳಿಸಿದರು.

ಇನ್ನು ಆಟೋ ಚಾಲಕರು ಕೆಲವು ವಿಚಾರಗಳು ಹೇಳಿದ್ದಾರೆ. ಇನ್ನೂ ಟ್ಯಾಕ್ಸ್ ವಿಚಾರದಲ್ಲಿ ಕೆಲವು ಬೇಡಿಕೆಗಳಿವೆ. ಈ 2 ಬೇಡಿಕೆಗಳು ಅಷ್ಟೇ ನಮ್ಮ ಸರ್ಕಾರದ್ದು. ಉಳಿದ ಎಲ್ಲಾ ಬೇಡಿಕೆಗಳು ಹಳೆಯ ಬಿಜೆಪಿ ಸರ್ಕಾರದ ಬೇಡಿಕೆಗಳು ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರಬಾಬು ನಾಯ್ಡುಗೆ ನ್ಯಾಯಾಂಗ ಬಂಧನ, ಜಾಮೀನು ಇಲ್ಲ!