Select Your Language

Notifications

webdunia
webdunia
webdunia
webdunia

ಅಭ್ಯರ್ಥಿಯ ಕಾರಿನ ಮೇಲೆ ಕಲ್ಲೆಸೆದ ಗ್ರಾಮಸ್ಥರು

ಅಭ್ಯರ್ಥಿಯ ಕಾರಿನ ಮೇಲೆ ಕಲ್ಲೆಸೆದ ಗ್ರಾಮಸ್ಥರು
ಚಾಮರಾಜನಗರ , ಗುರುವಾರ, 3 ಮೇ 2018 (14:48 IST)
ಮತ ಕೇಳಲು ಬಂದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ನರೇಂದ್ರ ಬೆಂಬಲಿಗರ  ಕಾರಿನ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆ. 
ಅಭಿವೃದ್ಧಿ ಮಾಡದೇ ಮತ ಕೇಳಲು ಬಂದಿದ್ದೀರಾ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಗಲಾಟೆಯಿಂದ ಕುಪಿತಗೊಂಡು ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಕೌದಳ್ಳಿಯಲ್ಲಿ ನಡೆದಿದೆ. 
 
ಕಾಂಗ್ರೆಸ್ ಕಾರ್ಯಕರ್ತರ ಉದ್ಧ ಟತನದಿಂದ ಕಾರಿನ ಮೇಲೆ  ಗ್ರಾಮಸ್ಥರು ಕಲ್ಲು ಎಸೆದಿದ್ದಾರೆ. ಚುನಾವಣೆ ಬಂದಾಗ ಮಾತ್ರ ಬರ್ತೀರಾ ಬೇರೆ ದಿನ ಎಲ್ಲಿಗೆ ಹೋಗಿರುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಗ್ರಾಮದ ಅಭಿವೃದ್ಧಿಗೆ ಏನು ಮಾಡಿದ್ದೀರಾ? ನಾವು ಯಾಕೆ ಮತ ಹಾಕಬೇಕು? ಶಾಸಕನ ಬೆಂಬಲಿಗರಿಗೆ ಎಂದು ಪ್ರಶ್ನೆ ಹಾಕಿದ ಗ್ರಾಮಸ್ಥರು.ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಹೋದಲ್ಲೆಲ್ಲಾ ಪ್ರಶ್ನೆಗಳನ್ನು ಕೇಳಿ ಗ್ರಾಮದೊಳಗೆ ಪ್ರವೇಶಿಸದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
 
ಇದರಿಂದ ಕುಪಿತಗೊಂಡು ಶಾಸಕನ ಬೆಂಬಲಿಗರಿಂದ ಗ್ರಾಮಸ್ಥರ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯನ್ನು ಖಂಡಿಸಿ ಕಾರಿನ ಮೇಲೆ ಕಲ್ಲು ಎಸೆದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಭ್ಯರ್ಥಿಗಳ ಪರವಾಗಿ ಕುಮಾರಸ್ವಾಮಿ ಭರ್ಜರಿ ಪ್ರಚಾರ