Select Your Language

Notifications

webdunia
webdunia
webdunia
webdunia

ರಾಜ್ಯ ಸಾರಿಗೆ ಬಸ್​​​​ ಮೇಲೆ ಕಲ್ಲು ತೂರಾಟ

ರಾಜ್ಯ ಸಾರಿಗೆ ಬಸ್​​​​ ಮೇಲೆ ಕಲ್ಲು ತೂರಾಟ
ಪುಣೆ , ಶನಿವಾರ, 26 ನವೆಂಬರ್ 2022 (16:06 IST)
ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್​ಗೆ ಪುಂಡರು ಕಲ್ಲು ತೂರಿ ಮತ್ತೆ ಪುಂಡಾಟ ಮೆರೆದಿದ್ದಾರೆ. ನಿನ್ನೆ ರಾತ್ರಿ 10.30 ಕ್ಕೆ ಮೀರಜ್- ಕಾಗವಾಡ‌ ಮಧ್ಯೆ ಪುಣೆಯಿಂದ ಅಥಣಿಗೆ ಬರುತ್ತಿದ್ದ ಕರ್ನಾಟಕ ಬಸ್​ಗೆ ಕಲ್ಲು ತೂರಿದ ಪರಿಣಾಮ ಬಸ್ ಮುಂದಿನ ಗಾಜು ಜಖಂ ಆಗಿದೆ. ಕರ್ನಾಟಕ ಬಸ್​ಗಳಿಗೆ ಕಲ್ಲು ತೂರಾಟ ನಡೆಸುತ್ತಿರುವುದರಿಂದ ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಮಿರಜ್ ಮಾರ್ಗವಾಗಿ ಸಂಚರಿಸುವ ಹಾಗೂ ಕಾಗವಾಡ ಬಾರ್ಡರ್ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ ಸೇವೆ ಬಂದ್​​ ಆಗಿದೆ. ಇದರಿಂದ ಪ್ರಯಾಣಿಕರಿಗೂ ತೊಂದರೆಯಾಗಿದೆ. ಕೆಲ ಕಿಡಿಗೇಡಿಗಳ ಪುಂಡಾಟಕ್ಕೆ ಸಾಮಾನ್ಯ ಜನರು ಸಂಚಾರ ವ್ಯವಸ್ಥೆ ಇಲ್ಲದೆ ಪರಿತಪಿಸುವಂತಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು-ಕಾಶ್ಮೀರಕ್ಕೂ ಇತ್ತ ಶಾರೀಕ್ ನಂಟು..!