Select Your Language

Notifications

webdunia
webdunia
webdunia
webdunia

ಎಂ.ಪಿ.ರವೀಂದ್ರ ಅಗಲಿಕೆಗೆ ಶ್ರೀರಾಮುಲು ಸಂತಾಪ

ಎಂ.ಪಿ.ರವೀಂದ್ರ ಅಗಲಿಕೆಗೆ ಶ್ರೀರಾಮುಲು ಸಂತಾಪ
ಬಳ್ಳಾರಿ , ಶನಿವಾರ, 3 ನವೆಂಬರ್ 2018 (15:43 IST)
ಮಾಜಿ ಡಿಸಿಎಂ ಎಂ.ಪಿ. ಪ್ರಕಾಶ್ ಅವರ ಪುತ್ರ ಹಾಗೂ ಮಾಜಿ ಶಾಸಕ ಎಂ.ಪಿ.ರವೀಂದ್ರ ಅಗಲಿಕೆಗೆ ಶಾಸಕ ಬಿ.ಶ್ರೀರಾಮುಲು ಸಂತಾಪ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಯಲ್ಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದು, ಮಾಜಿ‌ ಶಾಸಕ ಎಂ.ಪಿ. ರವೀಂದ್ರ ಅವರು ನಿಧನ ಆಗಿರುವ ಸುದ್ದಿ ತುಂಬಾ ನೋವಿನ ಸಂಗತಿಯಾಗಿದೆ. ಎಂ.ಪಿ.ಪ್ರಕಾಶ್ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.

ಅವರ ಮಗ ರವೀಂದ್ರ ಕೂಡ ಉತ್ತಮ ವ್ಯಕ್ತಿತ್ವ ಹೊಂದಿದ್ದಾರೆ. ದಾವಣಗೆರೆ, ಬಳ್ಳಾರಿ ಜಿಲ್ಲೆಯ ಜನ ಅವರನ್ನು  ಕಳೆಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ‌ದುಃಖ ಭರಿಸುವ ಶಕ್ತಿ ನೀಡಲಿ. ನನಗೆ ಉತ್ತಮ ಸ್ನೇಹಿತರಾಗಿ ರವೀಂದ್ರ ಇದ್ದರು ಎಂದು ಶ್ರೀರಾಮುಲು ಸ್ಮರಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರೆಬಲ್ ಸ್ಟಾರ್ ಅಂಬರೀಶ್, ಸಚಿವ ಡಿ.ಸಿ.ತಮ್ಮಣ್ಣ ಮತದಾನ