Select Your Language

Notifications

webdunia
webdunia
webdunia
webdunia

‘ಸಿಎಂ ಸಿದ್ದರಾಮಯ್ಯಗೆ ರಾವಣನ ಬುದ್ಧಿ’

‘ಸಿಎಂ ಸಿದ್ದರಾಮಯ್ಯಗೆ ರಾವಣನ ಬುದ್ಧಿ’
ಮೈಸೂರು , ಮಂಗಳವಾರ, 13 ಮಾರ್ಚ್ 2018 (13:35 IST)
ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರುವ ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯರಿಂದ ಮುನಿಸಿಕೊಂಡು ಬಿಜೆಪಿ ಸೇರಿದ್ದ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯರದ್ದು ರಾವಣನ ಬುದ್ಧಿ. ಇದು ಗೊತ್ತಿದ್ದರೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ರದ್ದು ವಿಭೀಷಣನ ಮೌನ ಎಂದು ಶ್ರಿನಿವಾಸ ಪ್ರಸಾದ್ ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ ಓರ್ವ ಹೊಗಳು ಭಟ್ಟ. ಠೇವಣಿ ಕಳೆದುಕೊಂಡ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಎಂದು ಹೊಗಳುವುದೇ ಅವರ ಕೆಲಸ. ರಾಹುಲ್ ಗಾಂಧಿ ಶೌಟಿಂಗ್ ಕಮಾಂಡೆಂಟ್ ಎಂದು ಶ್ರೀನಿವಾಸ ಪ್ರಸಾದ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಜಯಾಬಚ್ಚನ್ ಅವರು ದೇಶದ ಅತ್ಯಂತ ಶ್ರೀಮಂತ ಸಂಸದೆಯಂತೆ!