Publish Date: Mon, 08 Jan 2024 (15:45 IST)
Updated Date: Mon, 08 Jan 2024 (17:49 IST)
ಬೆಂಗಳೂರು-ಬೆಂಗಳೂರಿನಿಂದ ರಾಮ ಜನ್ಮಭೂಮಿ ಅಯೋಧ್ಯಯತ್ತ ಅಳಿಲಿನ ಪುತ್ಥಳಿ ಹೊರಟ್ಟಿದೆ.ಪ್ರಸಿದ್ಧಿ ಇಂಜಿನಿಯರ್ಸ್ ಕಂಪೆನಿಯ ಮಾಲೀಕ ಸಿ.ಪ್ರಕಾಶ್ ರಿಂದ ಅಳಿಲು ಸೇವೆ ಸಲ್ಲಿಸಲಾಗಿದೆ.ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ, 15 ಅಡಿ ಎತ್ತರದ ಅಳಿಲಿನ ಪುತ್ಥಳಿ ನಿರ್ಮಾಣ ಮಾಡಲಾಗಿದೆ.ಸುಮಾರು 7.5 ಅಡಿ ಅಗಲ ವಿಸ್ತೀರ್ಣ ಬೃಹದಾಕಾರದ ಅಳಿಲು ಪುತ್ಥಳಿ ಇದೆ.
ಅಯೋಧ್ಯೆಯ ರೈಲ್ವೆ ನಿಲ್ದಾಣ ಆವರಣದ ಮಧ್ಯ ಭಾಗದಲ್ಲಿ ಜ.12ರಂದು ಈ ಪುತ್ಥಳಿ ಅನಾವರಣಗೊಳ್ಳಲಿದೆ.ನಿನ್ನೆ ಅಳಿಲು ಪುತ್ಥಳಿ ಹೊತ್ತು ಟ್ರಕ್ ನಲ್ಲಿ ಅಯೋಧ್ಯೆಯತ್ತ ತೆರಳಿದೆ.11 ನೇ ತಾರೀಖು ಅಯೋಧ್ಯೆಗೆ ತಲುಪಲಿದ್ದು, 12ರಂದು ಅಯೋಧ್ಯೆ ರೈಲ್ವೆ ನಿಲ್ದಾಣದಲ್ಲಿ ಆನಾವರಣಗೊಳ್ಳಲಿದೆ.