Select Your Language

Notifications

webdunia
webdunia
webdunia
webdunia

ಜ್ಞಾನ ದೇಗುಲಕ್ಕೂ ಕಾಲಿಟ್ಟ ವಾಮಾಚಾರ

ಜ್ಞಾನ ದೇಗುಲಕ್ಕೂ ಕಾಲಿಟ್ಟ ವಾಮಾಚಾರ
mysore , ಮಂಗಳವಾರ, 13 ಸೆಪ್ಟಂಬರ್ 2022 (19:58 IST)
ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ವಾಮಾಚಾರ ನಡೆಯುತ್ತಿದೆ.ಕೆಎಸ್‌ಒಯು ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಕೋಳಿ ತಲೆ, ಕಾಲನ್ನ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದಾರೆ.ಜೊತೆಗೆ ಕುಂಕುಮ, ಕೂದಲು, ಬಳೆಚೂರು ಹಾಕಿ ವಿಕೃತಿ ಮೆರೆದಿದ್ದಾರೆ.
 
ಪತ್ರಿಕೋದ್ಯಮ ವಿಭಾಗದ ಹಿಂದೆಯಿದ್ದ ಕಛೇರಿಯಲ್ಲಿ ವಾಮಾಚಾರ ನಡೆದಿದೆ.ಓಡಿ ತೇಜಸ್ವಿ ನವಿಲೂರು ಸುಪರ್ದಿಯಲ್ಲಿ ಮುಖ್ಯಸ್ಥರ ಕೊಠಡಿ ಇತ್ತು. ಕಿಡಿಗೇಡಿಗಳು ಹಿಂದಿನ ದಿನ ಎಚ್ಓಡಿ ಫೋಟೋ ಹರಿದು, ವಾಮಾಚಾರ ಮಾಡಿದ್ದಾರೆ.
 
ವಾಮಾಚಾರಕ್ಕೆ ಒಳಗಾದ ಅಧ್ಯಾಪಕ ತೇಜಸ್ವಿ ಅವರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ಕಳೆದ ಆರು ತಿಂಗಳ ಹಿಂದೆಯೇ ಕೊಠಡಿ ಕೀ ನೀಡಿರುವ ತೇಜಸ್ವಿ ಆರು ತಿಂಗಳ ಬಳಿಕ ಕೊಠಡಿಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಜ್‍ಗೆ ಹಾಕಿದ್ದ ಮೊಬೈಲ್ ಬ್ಯಾಟರಿ ಸ್ಫೋಟದಿಂದ ಮಗು ಸಾವು!