Select Your Language

Notifications

webdunia
webdunia
webdunia
webdunia

ಮೈಕ್ರೋಬಿ ಫೌಂಡೇಶನ್ ವತಿಯಿಂದ ಮಣ್ಣು ಜೀವಿಸಲಿ ಅಭಿಯಾನ ಕಾರ್ಯಕ್ರಮ

ಮೈಕ್ರೋಬಿ ಫೌಂಡೇಶನ್
ಮೈಕ್ರೋಬಿ ಫೌಂಡೇಶನ್ ವತಿಯಿಂದ ಮಣ್ಣು ಜೀವಿಸಲಿ ಅಭಿಯಾನ ಕಾರ್ಯಕ್ರಮವನ್ನ  ರಾಜ್ಯಾದ್ಯಂತ ಶುರುಮಾಡಲಾಗುವುದು ಎಂದು ಖ್ಯಾತ ಸಾವಯವ ತಜ್ಙರಾದ  ಡಾ. ಕೆ.ಆರ್ ಹುಲ್ಲುನಾಚೇಗೌಡರು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ  ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ. ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 9 ತಿಂಗಳ ಬೃಹತ್ ಪ್ರಾಯೋಗಿಕ ಕಾರ್ಯಗಾರ ನಡೆಸಲು ಸಿದ್ದವಾಗಿದೆ. ಮೈಕ್ರೋಬಿ ಫೌಂಡೇಶನ್ನ ಮತ್ತೊಂದು ಮಹತ್ವದ ಯೋಜನ ಮಾದರಿ ಗ್ರಾಮ' ನಿರ್ಮಾಣ ಮೊದಲ ಹಂತದಲ್ಲಿ 9 ಜಿಲ್ಲೆಗಳ ಒಂದೊಂದು ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಸಾವಯವ ಕೃಷಿಯಲ್ಲಿ ಯಶಸ್ವಿಯಾಗುವಂತ ರೈತರಿಗೆ ನಿರಂತರ ಮಾರ್ಗದರ್ಶನವನ್ನು ನೀಡುವುದು, ಸರ್ಕಾರಿ ಇಲಾಖೆಗಳಿಂದ ಅನುದಾನಗಳು, ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟ ಮುಂತಾದ ಸರ್ವತೋಮುಖವಾಗಿ ಗ್ರಾಮವನ್ನು ವಿಕಾಸಗೊಳಿಸಲಾಗುವುದು ಎಂದು ತಿಳಿಸಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ: ಉಚಿತ ಬಸ್ ಪ್ರಯಾಣ