Select Your Language

Notifications

webdunia
webdunia
webdunia
webdunia

ನನ್ನ ರಾಜೀನಾಮೆ ಪತ್ರ ಸಿದ್ಧ: ಸಿಎಂ ಉದ್ಧವ್‌ ಠಾಕ್ರೆ

webdunia
bangalore , ಬುಧವಾರ, 22 ಜೂನ್ 2022 (20:01 IST)
ನನ್ನ ರಾಜೀನಾಮೆ ಪತ್ರ ಸಿದ್ಧವಿದೆ. ಯಾವುದೇ ಶಿವಸೈನಿಕರು ಬೇಕಾದರೂ ಸಿಎಂ ಆಗಬಹುದು ಎಂದು ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರ ಸರಕಾರದಲ್ಲಿ ಶಿವಸೇನೆ ಕಾರ್ಯಕರ್ತರು ಬಂಡಾಯ ಘೋಷಿಸಿದ್ದರಿಂದ ಸರಕಾರ ಪತನದ ಬಗ್ಗೆ ಅನುಮಾನ ಸೃಷ್ಟಿಯಾಗಿರುವ ಬೆನ್ನಲ್ಲೇ ಬುಧವಾರ ಫೇಸ್‌ ಬುಕ್‌ ಲೈವ್‌ ನಲ್ಲಿ ಮಾತನಾಡಿದ ಅವರು ನಾನು ಕೆಲವೊಂದು ಸಂದರ್ಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕಾಯಿತು ಎಂದರು.
ನನಗೆ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಕಳೆದ ೨ ತಿಂಗಳಿನಿಂದ ಯಾರನ್ನೂ ಭೇಟಿ ಆಗಿರಲು ಸಾಧ್ಯವಾಗಿರಲಿಲ್ಲ. ಆದರೆ ಹಿಂದೂತ್ವವನ್ನು ನಾವು ಎಂದೂ ಬಿಟ್ಟಿಲ್ಲ. ಮುಂದೆಯೂ ಬಿಡುವುದಿಲ್ಲ. ಆದರೆ ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀನಿವಾಸ ಗೌಡ, ಗುಬ್ಬಿ ಶ್ರೀನಿವಾಸ್ ಜೆಡಿಎಸ್‌ ನಿಂದ ಉಚ್ಛಾಟನೆ