Publish Date: Thu, 07 Jun 2018 (10:04 IST)
Updated Date: Thu, 07 Jun 2018 (10:05 IST)
ಬೆಂಗಳೂರು: ಬಾದಾಮಿಯಲ್ಲಿ ಈ ಬಾರಿ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದಿನಿಂದ ಸ್ವ ಕ್ಷೇತ್ರ ಸಂಚಾರ ನಡೆಸಲಿದ್ದಾರೆ.
ಚಾಮುಂಡೇಶ್ವರಿಯಲ್ಲಿ ಸೋತರೂ ಬಾದಾಮಿಯ ಜನ ಸಿದ್ದರಾಮಯ್ಯ ಕೈ ಹಿಡಿದಿದ್ದರು. ಹೀಗಾಗಿ ಇಲ್ಲಿನ ಜನರಿಗೆ ಥ್ಯಾಂಕ್ಸ್ ಹೇಳಲು ಸಿದ್ದರಾಮಯ್ಯ ಕ್ಷೇತ್ರ ಸಂಚಾರ ಮಾಡಲಿದ್ದಾರೆ.
ಐದು ದಿನಗಳ ಕಾಲ ಬಾದಾಮಿಯಲ್ಲಿ ಯಾತ್ರೆ ನಡೆಸಲಿದ್ದಾರೆ. ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದು ಸಂಪುಟ ರಚನೆ ಗೊಂದಲಗಳೂ ಮುಗಿದ ಬಳಿಕ ಇದೀಗ ಕೊಂಚ ಬಿಡುವಾಗಿರುವ ಸಿದ್ದರಾಮಯ್ಯ ಸ್ವಕ್ಷೇತ್ರದ ಜನರೊಂದಿಗೆ ಬೆರೆಯಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.