Select Your Language

Notifications

webdunia
webdunia
webdunia
webdunia

ಕರಾವಳಿ ಜನ ಯಾಕಾದ್ರೂ ಬಿಜೆಪಿಗೆ ವೋಟು ಕೊಟ್ಟರೋ: ಸಿದ್ದರಾಮಯ್ಯ

ಕರಾವಳಿ ಜನ ಯಾಕಾದ್ರೂ ಬಿಜೆಪಿಗೆ ವೋಟು ಕೊಟ್ಟರೋ: ಸಿದ್ದರಾಮಯ್ಯ
ಬೆಂಗಳೂರು , ಶುಕ್ರವಾರ, 26 ಅಕ್ಟೋಬರ್ 2018 (08:41 IST)
ಬೆಂಗಳೂರು: ಕರಾವಳಿ ಜನ ಯಾಕಾದ್ರೂ ಬಿಜೆಪಿಗೆ ವೋಟು ಕೊಟ್ಟರೆಂದು ಅರ್ಥವಾಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಉಡುಪಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಉಡುಪಿಯ ಬೈಂದೂರಿನಲ್ಲಿ ಪ್ರಚಾರ ಭಾಷಣ ಮಾಡಿದ್ದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

‘ನಿಮ್ಮ ದನ ಕರುಗಳು ಕೊಟ್ಟಿಗೆಗೆ ಬರಬೇಕೇ? ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆ ಸೇರಬೇಕೇ? ಹಾಗಿದ್ದರೆ ಬಿಜೆಪಿಗೆ ಮತ ಕೊಡಿ ಎಂದು ಬಿಜೆಪಿಯವರು ಮತ ಕೇಳಿದ್ದರು. ರಾಜ್ಯದಲ್ಲಿ ಈಗ ಸಮ್ಮಿಶ್ರ ಸರ್ಕಾರವಿದೆ. ಯಾಕೆ ನಿಮ್ಮ ದನ ಕರುಗಳು ಕೊಟ್ಟಿಗೆಗೆ ಬರುತ್ತಿಲ್ಲವೇ? ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲವೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸೋದರ ಸೊಸೆಯ ಮೇಲೆ ಸತತ 10 ವರ್ಷಗಳ ಕಾಲ ಅತ್ಯಾಚಾರ ಎಸಗಿದ ಕಾಮುಕರು