Select Your Language

Notifications

webdunia
webdunia
webdunia
webdunia

ನಿಲ್ಲದ ಸಿದ್ದರಾಮಯ್ಯ-ಸದಾನಂದ ಗೌಡ ತಿಕ್ಕಾಟ

ನಿಲ್ಲದ ಸಿದ್ದರಾಮಯ್ಯ-ಸದಾನಂದ ಗೌಡ ತಿಕ್ಕಾಟ
ಬೆಂಗಳೂರು , ಭಾನುವಾರ, 18 ನವೆಂಬರ್ 2018 (09:33 IST)
ಬೆಂಗಳೂರು: ಕರಾವಳಿ ವಿಚಾರವಾಗಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಸದಾನಂದ ಗೌಡ ನಡುವೆ ಟ್ವಿಟರ್ ವಾರ್ ಮುಂದುವರಿದಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ಮಂಗಳೂರು ಭೇಟಿ ಬಗ್ಗೆ ವ್ಯಂಗ್ಯ ಮಾಡಿದ್ದ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟಿದ್ದ ಸದಾನಂದ ಗೌಡರ ವಿರುದ್ಧ ಮತ್ತೆ ಸಿದ್ದರಾಮಯ್ಯ ಟ್ವೀಟ್ ವಾರ್ ನಡೆಸಿದ್ದಾರೆ.

‘ಸದಾನಂದ ಗೌಡರೇ, ಕರಾವಳಿ ಯಾಕೆ, ಇಡೀ ಕರ್ನಾಟಕದ ಜನರಿಗೆ ತಮ್ಮ ಆಯ್ಕೆ ಗೊತ್ತಿದೆ ಎಂದು ಕರೆಕ್ಟಾಗಿ ಹೇಳಿದ್ದೀರಿ. ನೀವು ಉಡುಪಿ-ಪುತ್ತೂರು ಬಿಟ್ಟು ಬೆಂಗಳೂರಿಗೆ ಬಂದು ಸೇರಿಕೊಂಡಿದ್ದು ಕರಾವಳಿಯವರಿಗೆ ಖಂಡಿತಾ ಗೊತ್ತಿದೆ. ಜೆಡಿಎಸ್ ಜತೆ ಸೇರಿಕೊಂಡು ಸರ್ಕಾರ ರಚಿಸುವಾಗ ನಿಮಗೆ ಬಹುಮತ ಇತ್ತೇ?’ ಎಂದು ಸಿದ್ದರಾಮಯ್ಯ ಟ್ವಿಟರ್ ನಲ್ಲಿ ತಿರುಗೇಟು ಕೊಟ್ಟಿದ್ದಾರೆ. ಇದಕ್ಕೆ ಗೌಡರ ಪ್ರತಿಕ್ರಿಯೆ ಏನು ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರ ಮರೆಮಾಚಲು ಸಿಬಿಐಗೆ ನೋ ಎಂಟ್ರಿ ಎಂದಿದ್ದೀರಾ? ಆಂಧ್ರ, ಪ.ಬಂಗಾಲ ಸಿಎಂಗೆ ಅರುಣ್ ಜೇಟ್ಲಿ ಲೇವಡಿ