Select Your Language

Notifications

webdunia
webdunia
webdunia
Monday, 3 March 2025
webdunia

ಕಾಂಗ್ರೆಸ್ ನಿರ್ನಾಮವಾಗುವವರೆಗೆ ಸಿದ್ದರಾಮಯ್ಯ ಬಿಡಲ್ಲ- ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಕಾಂಗ್ರೆಸ್ ನಿರ್ನಾಮವಾಗುವವರೆಗೆ ಸಿದ್ದರಾಮಯ್ಯ ಬಿಡಲ್ಲ- ಕೆ.ಎಸ್.ಈಶ್ವರಪ್ಪ ವಾಗ್ದಾಳಿ
ಬಾಗಲಕೋಟೆ , ಸೋಮವಾರ, 18 ನವೆಂಬರ್ 2019 (10:44 IST)
ಬಾಗಲಕೋಟೆ: ಮೋದಿ ಗಾಳಿಗೆ ಕೈ, ಜೆಡಿಎಸ್ ನವರು ಓಡೋಡಿ ಬರ್ತಿದ್ದಾರೆ. ಅವರನ್ನ ತಡೆಯಲು ನಮ್ಮ ಕೈಯಲ್ಲಿ ಆಗುತ್ತಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.




ಬಿಜೆಪಿಗೆ ಬಂದವರನ್ನು ನಾವು ಸ್ವಾಗತ ಮಾಡುತ್ತಿದ್ದೇವೆ, ಆದರೆ ಅವರನ್ನ ಎಲ್ಲಿಡಬೇಕೋ ಅಲ್ಲಿಯೇ ಇಡುತ್ತಿದ್ದೇವೆ. ಯಾರ್ಯಾರು ಬೇಕೋ ಅವರನ್ನ ಬಳಸಿಕೊಳ್ಳುತ್ತೇವೆ. ಯಾರಿಗೆ ಏನು ಸ್ಥಾನಮಾನ ಕೊಡಬೇಕೋ ಕೊಡುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.


ಕಾಂಗ್ರೆಸ್ ನಿರ್ನಾಮವಾಗುವವರೆಗೆ ಸಿದ್ದರಾಮಯ್ಯ ಬಿಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಈಗ 2 ಗುಂಪುಗಳಾಗಿವೆ. ಒಂದು ಡಿಕೆಶಿ ಗುಂಪು, ಮತ್ತೊಂದು ಸಿದ್ದರಾಮಯ್ಯ ಗುಂಪು. ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಒಡೆಯುತ್ತಿದ್ದಾರೆ. ಒಡೆಯುವುದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಸ್ಸೀಮ. ಬಿಜೆಪಿ ಬಗ್ಗೆ ಮಾತಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ ಎಂದು ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲಿಯೇ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಸಂಸ್ಥೆ ಮಾರಾಟ!