Select Your Language

Notifications

webdunia
webdunia
webdunia
webdunia

ಅಚ್ಛೇ ದಿನ್ ಹೆಸರಲ್ಲಿ ಹಸಿವಿನ ದಿನ ಬರ್ತಿವೆ ಅಂತ ಮೋದಿಗೆ ತಿವಿದ ಸಿದ್ದರಾಮಯ್ಯ

ಅಚ್ಛೇ ದಿನ್ ಹೆಸರಲ್ಲಿ ಹಸಿವಿನ ದಿನ ಬರ್ತಿವೆ ಅಂತ ಮೋದಿಗೆ ತಿವಿದ ಸಿದ್ದರಾಮಯ್ಯ
ಬೆಂಗಳೂರು , ಶನಿವಾರ, 16 ನವೆಂಬರ್ 2019 (16:47 IST)
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮುಂದುವರಿಸಿದ್ದಾರೆ.

ಗರೀಬಿ ಹಟಾವೋ ಎನ್ನುವ ಘೋಷಣೆಯೊಂದಿಗೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರು ಬಡತನದ ವಿರುದ್ಧ ಸಮರ ಸಾರಿದ್ದನ್ನು ಬಿಜೆಪಿ ಟೀಕೆ ಮಾಡುತ್ತಿದೆ. ಇದಕ್ಕೆ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ದಾರೆ. ಕೇಂದ್ರ ಸರಕಾರವು ಅಚ್ಛೇ ದಿನ್ ಹೆಸರಿನಲ್ಲಿ ದೇಶವನ್ನು ಬಡತನ ಹಾಗೂ ಹಸಿವಿನ ದಿನಗಳಿಗೆ ಕೊಂಡೊಯ್ಯುತ್ತಿದೆ ಅಂತ ಕಿಡಿಕಾರಿದ್ದಾರೆ.

ಇದೇ ವೇಳೆ, ರಾಜ್ಯದಲ್ಲಿ ಆಡಳಿತ ನಡೆಸಿರುವ ಬಿಜೆಪಿ, ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ, ಅನ್ನಭಾಗ್ಯ ಕಾರ್ಯಕ್ರಮಗಳನ್ನು ರದ್ದು ಮಾಡೋಕೆ ಮುಂದಾಗಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಲ್ವಾರ್ ಹಿಡಿದು ಕುಣಿದ ಸ್ಮೃತಿ ಇರಾನಿ