Select Your Language

Notifications

webdunia
webdunia
webdunia
webdunia

ಭಷ್ಟಚಾರದಿಂದ ಸರ್ಕಾರ ನಡೆಸುವ ಬದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ವಿಶ್ವೇಶ್ವರ ಹೆಗಡೆ

ಕರ್ನಾಟಕ ವಸತಿ ಯೋಜನೆ ಹಗರಣ

Sampriya

ಕಾರವಾರ , ಶನಿವಾರ, 21 ಜೂನ್ 2025 (16:20 IST)
Photo Credit X
ಕಾರವಾರ: ಬಡವರಿಗೆ ಮಂಜೂರಾದ ಮನೆಯಲ್ಲೂ ಲಂಚ ಕೇಳುವ ಸ್ಥಿತಿಗೆ ರಾಜ್ಯ ಸರ್ಕಾರ ಇಳಿದಿದೆ ಅಂದ್ರೆ, ಇಂತ ಭ್ರಷ್ಟ ಸರ್ಕಾರ ನಡೆಸುವ ಬದಲು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು.

ಕಾಂಗ್ರೆಸ್ ಶಾಸಕ ಬಿ ಆರ್‌ ಪಾಟೀಲ್ ಅವರು ವಸತಿ ಯೋಜನೆಯಲ್ಲಿ ಭಷ್ಟಚಾರ ನಡೆದಿದೆ ಎಂದು ಬಹಿರಂಗಪಡಿಸಿದ ಸಂಬಂಧ ಅವರ ಈ ಹೇಳಿಕೆ ಬಂದಿದೆ. 

ಪಾಟೀಲ್ ಅವರ ಹೇಳಿಕೆಯಿಂದ ಇದೀಗ ಕಾಂಗ್ರೆಸ್ ಭ್ರಷ್ಟಾಚಾರ ಆಡಳಿತದ ಮುಖವಾಡ ಕಳಚಿದೆ ಎಂದು ಶನಿವಾರ ಹೇಳಿದರು. 

'ವಸತಿ ಯೋಜನೆ ಮನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 15 ರಷ್ಟು ಮೀಸಲಾತಿ ಜಾರಿ ಮಾಡಲುಹೊರಟಿರುವುದು ಓಲೈಕೆಯ ಪರಮಾವಧಿ. ಇದು ಸಿಎಂ, ಡಿಸಿಎಂ ಅವರ ಬೇಕಾಬಿಟ್ಟಿ ಆಡಳಿತಕ್ಕೆ ಹಿಡಿದ ಕೈಗನ್ನಡಿ' ಎಂದು ಆರೋಪ ಮಾಡಿದರು.

'ರಾಜ್ಯ ಸರ್ಕಾರ ಹೊಸದಾಗಿ ಜಾತಿ ಜನಗಣತಿ ಮಾಡುವ ಬದಲು ಕೇಂದ್ರ ಸರ್ಕಾರ ಮಾಡಲಿರುವ ಗಣತಿಗೆ ಸಹಕಾರ ನೀಡಬೇಕು. ಅಗತ್ಯ ಸಲಹೆಗಳಿದ್ದರೆ ನೀಡಲಿ' ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಊಹಿಸಲಾಗದ ದುಃಖ, ಗಂಡಾಂತರ: ಕೋಡಿ ಶ್ರೀಗಳ ಶಾಕಿಂಗ್ ಭವಿಷ್ಯ