Select Your Language

Notifications

webdunia
webdunia
webdunia
Saturday, 12 April 2025
webdunia

‘ಫಿಟ್ನೆಸ್ ಹೋದರೆ ರಾಜಕೀಯ ಬಿಡುತ್ತೇನೆ:ಸಿದ್ದರಾಮಯ್ಯ ಹೇಳಿಕೆ

ರಾಜಕೀಯ
ಬೆಂಗಳೂರು , ಮಂಗಳವಾರ, 19 ಅಕ್ಟೋಬರ್ 2021 (14:11 IST)
ಬೆಂಗಳೂರು : ಸಿಂದಗಿಯಲ್ಲಿ ಗ್ರೀನ್ ಟೀ ಕುಡಿಯುತ್ತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಫಿಟ್ನೆಸ್ ಕುರಿತು ಮಾತಾನಡಿದ್ದಾರೆ. ಇದೇ ವೇಳೆ ಅವರು ಒಂದು ವೇಳೆ ಫಿಟ್ನೆಸ್ ಹೋದರೆ ರಾಜಕೀಯವ ಬಿಡುತ್ತೇನೆ ಎಂದು ಹೇಳಿರುವುದು ಎಲ್ಲರ ಗಮನಸೆಳೆದಿದೆ.

‘‘ಮಧುಮೇಹವಿರುವ ಹಿನ್ನೆಲೆಯಲ್ಲಿ ನಾನು ಶುಗರ್ ಲೆಸ್ ಗ್ರೀನ್ ಟೀ ಕುಡಿಯುತ್ತೇನೆ.  ನೋ ಮಿಲ್ಕ್, ನೋ ಶುಗರ್. ನಮ್ಮ ದೇಹದಲ್ಲಿ ಜಾಸ್ತಿ ಇರುವುದನ್ನು ಬಿಡಬೇಕು. ಕಡಿಮೆ ಇರುವುದನ್ನು ತೆಗೆದುಕೊಳ್ಳಬೇಕು’’ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಇದೇ ವೇಳೆ ಅವರು, ‘‘ನಾನು ಯಾವಾಗಲೂ ಫಿಟ್ ಆಗಿ ಇರುತ್ತೇನೆ. ಫಿಟ್‌ನೆಸ್ ಹೋದರೆ ಆಗ ರಾಜಕೀಯ ಬಿಡುತ್ತೇನೆ. ಓಡಾಟಕ್ಕೆ ಆಗದಿದ್ದಾಗ ನಮಗೆ ರಾಜಕೀಯ ಏಕೆ ಬೇಕು?’’ ಎಂದು ಸಿದ್ದರಾಮಯ್ಯ ನುಡಿದಿದ್ದಾರೆ.
“ವಯಸ್ಸಾದ ಮೇಲೆ ನರಳಾಡುತ್ತಾ ರಾಜಕೀಯ ಮಾಡಬಾರದು. ಇದನ್ನು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ. ಬೇರೆಯವರು ಅವರವರ ಇಷ್ಟ. ಸದ್ಯಕ್ಕೆ ಫಿಟ್ ಆಗಿದ್ದೇನೆ, ಫಿಟ್ ಆಗಿರೋವರೆಗೂ ರಾಜಕೀಯದಲ್ಲಿರುತ್ತೇನೆ. ಫಿಟ್ ಇಲ್ಲದಾಗ ರಾಜಕೀಯ ಬಿಡುವೆ”  ಎಂದು ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್. ಯಡಿಯೂರಪ್ಪಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ ಪ್ರದಾನ