Select Your Language

Notifications

webdunia
webdunia
webdunia
webdunia

ರಾಜೀವ್ ಬದಲು ರಾಹುಲ್ ಹತ್ಯೆ ಎಂದ ಸಿದ್ದರಾಮಯ್ಯ

ಸಿದ್ದರಾಮಯ್ಯ
ಕೊಪ್ಪಳ , ಗುರುವಾರ, 14 ಡಿಸೆಂಬರ್ 2017 (15:24 IST)
ರಾಹುಲ್ ಗಾಂಧಿ ಅವರ ಹತ್ಯೆಗೆ ಮುನ್ನ ಲೋಕಸಭೆ ಚುನಾವಣೆ ನಡೆದಿದ್ದರೆ ನಾನೇ ಗೆಲ್ಲುತ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕುಷ್ಟಗಿಯಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ರಾಜೀವ್‌ ಬದಲು ರಾಹುಲ್‌ ಎಂದಿದ್ದಾರೆ.
 
ರಾಜೀವ್ ಗಾಂಧಿ ಹತ್ಯೆ ನಡೆಯುವ ಮುನ್ನ ಎನ್ನವ ಬದಲು ರಾಹುಲ್ ಗಾಂಧಿ ಎನ್ನುತ್ತಿದ್ದಂತೆ ಸಮಾವೇಶದಲ್ಲಿ ಕೆಲಕಾಲ ಗೊಂದಲ ಮೂಡಿತ್ತು. ತಪ್ಪಿನ ಅರಿವಾಗಿ ಕೂಡಲೇ ನಾನು ಸರಿಯಾಗಿ ಹೇಳುತ್ತಿದ್ದೆ ಎನ್ನುವ ಮೂಲಕ ಮಾತಿನ ವರಸೆಯನ್ನೇ ಬದಲಾಯಿಸಿದರು.
 
1991ರಲ್ಲಿ ಲೋಕಸಭೆ ಚುನಾವಣೆಗೆ ಕೊಪ್ಪಳದಿಂದ ಸ್ಪರ್ಧೆ ಮಾಡಿದ್ದಾಗ, ಹೊಸಪೇಟೆ ಭಾಗದಲ್ಲಿ ಕಡಿಮೆ ಮತ ಲಭಿಸಿದ್ದರಿಂದ ಸೋಲು ಅನುಭವಿಸಿದೆ. ಒಂದು ವೇಳೆ ಲೋಕ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರವಿ ಬೆಳಗೆರೆಗೆ ಎದುರಾಯಿತು ಮತ್ತೊಂದು ಸಂಕಷ್ಟ