Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಿ ನಿರ್ಣಯ ವಾಪಸ್ ಪಡೆಯಲಿ-ಮಾಜಿ ಸಿಎಂ ಯಡಿಯೂರಪ್ಪ

ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಿ ನಿರ್ಣಯ ವಾಪಸ್ ಪಡೆಯಲಿ-ಮಾಜಿ ಸಿಎಂ ಯಡಿಯೂರಪ್ಪ
bangalore , ಶನಿವಾರ, 25 ನವೆಂಬರ್ 2023 (15:22 IST)
ಮುಖ್ಯಮಂತ್ರಿಗಳು ಡಿಕೆಶಿ ಅವರ ಸಿಬಿಐ ಕೇಸ್ ವಾಪಸ್ ಪಡೆದಿದ್ದಾರೆ.ಈ ಹಿಂದೆ ಎಜಿ ಒಪ್ಪಿಗೆ ಇಲ್ಲದೇ ಬಿಜೆಪಿಯವ್ರು ಕಾನೂನು ಬಾಹಿರವಾಗಿ ಅನುಮತಿ ಕೊಟ್ಟಿದ್ರು ಅಂತ ಆರೋಪಿಸಿದ್ದಾರೆ.ಆದರೆ ವಾಸ್ತವ ಸ್ಥಿತಿ ಇಡಿಯವ್ರು  ಸಿಬಿಐಗೆ ಕೇಸ್ ಕೊಡಿ ಅಂತ ಪತ್ರ ಬರೆದಿದ್ದರು.ಹಾಗಾಗಿ ನಾವು ಪ್ರಕರಣ ಸಿಬಿಐಗೆ ಕೊಟ್ಟಿದ್ದೆವು ಎಂದು ಇಡಿ ಬರೆದಿದ್ದ ಪತ್ರ ಯಡಿಯೂರಪ್ಪ ಓದಿದ್ದಾರೆ.
 
ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರದ ಕಾನೂನು ಬಾಹಿರ ಆದೇಶ ವಾಪಸ್ ಪಡೆದಿದ್ದೇವೆ ಅಂದಿದ್ದಾರೆ.ಇದು ವಾಸ್ತವಿಕ ಅಂಶ ಅಲ್ಲ.ಡಿಕೆಶಿ ಅವರನ್ನು ರಕ್ಷಣೆ ಮಾಡಲು ಸಿದ್ದರಾಮಯ್ಯ ಈ ನಿರ್ಧಾರ ತಗೊಂಡಿದ್ದಾರೆ.ನಾವು ಎಜಿ ಅಭಿಪ್ರಾಯ ಪಡೆದೇ ಸಿಬಿಐಗೆ ಪ್ರಕರಣ ಕೊಟ್ಟಿದ್ದೆವು.ಅಧಿವೇಶನದಲ್ಲಿ ಇನ್ನಷ್ಟು ದಾಖಲೆಗಳನ್ನು ಇಟ್ಟು ಇದರ ಬಗ್ಗೆ ಚರ್ಚೆ ಮಾಡ್ತೇವೆ.ಡಿಕೆಶಿ ಇದನ್ನು ಹೈಕೋರ್ಟ್ ನಲ್ಲಿ ಪ್ರಸ್ತಾಪಿಸಿದ್ರು.ಹೈಕೋರ್ಟ್ ಇದನ್ನು ತಳ್ಳಿ ಹಾಕಿತ್ತು.ಡಿಕೆಶಿ ಅವರನ್ನು ಸಿಬಿಐ ಕೇಸ್ ನಿಂದ ರಕ್ಷಿಸಲು ಈ ನಿರ್ಧಾರ ತಗೊಂಡಿದ್ದಾರೆ.

ಸಿದ್ದರಾಮಯ್ಯ ಮಾಡಿದ ಕೆಲಸ ಅಕ್ಷಮ್ಯ ಅಪರಾಧ.ಕಾನೂನು ಬಾಹಿರವಾಗಿ ಡಿಕೆಶಿ ಉಳಿಸಲು ಈ ಕೆಲಸವನ್ನು ಸಿಎಂ ಮಾಡಬಾರದಾಗಿತ್ತು.ಈಗಲಾದರೂ ಸರ್ಕಾರ ತನ್ನ ನಿರ್ಣಯ ವಾಪಸ್ ಪಡೆಯಲಿ,ರಾಜ್ಯದ ಜನ ಇದನ್ನು ಕ್ಷಮಿಸಲ್ಲ.ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಿ ನಿರ್ಣಯ ವಾಪಸ್ ಪಡೆಯಲಿ ಎಂದು ಯಡಿಯೂರಪ್ಪ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

36ನೇ ಲಾ ಏಷ್ಯಾ (LAWASIA) ಕಾನ್ಫರೆನ್ಸ್‌ಗೆ ಸಿಎಂ ಸಿದ್ದರಾಮಯ್ಯ ಚಾಲನೆ