Publish Date: Sat, 27 Jan 2018 (16:27 IST)
Updated Date: Sat, 27 Jan 2018 (16:42 IST)
ಬೆಂಗಳೂರು: ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಶಿವಕುಮಾರ ಸ್ವಾಮೀಜಿ ಅವರು ಚಿಕಿತ್ಸೆ ಪಡೆದು ಬೆಂಗಳೂರಿನಿಂದ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಹಿಂದಿರುಗಿದ್ದಾರೆ. ಭಕ್ತರಿಗೆ ಇದೊಂದು ಸಮಾಧಾನ ನೀಡಿದೆ.
ಸ್ವಾಮೀಜಿ ಅವರ ಆಗಮನದಿಂದ ಮಠದಲ್ಲಿ ಈಗ ಸಂತಸದ ವಾತಾವರಣ ಕಾಣಿಸಿಕೊಂಡಿದೆ. ಸ್ವಾಮೀಜಿ ಅವರು ಮಠದಲ್ಲೇ 10 ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. 10 ದಿನಗಳ ಕಾಲ ಶ್ರೀಗಳ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮಠದಲ್ಲಿಯೇ ಬೆಂಗಳೂರಿನ ಬಿಜಿಎಸ್ ವೈದ್ಯರು ಚಿಕಿತ್ಸೆ ಮುಂದುವರಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ