Select Your Language

Notifications

webdunia
webdunia
webdunia
webdunia

ಎಸ್.ಆರ್.ಹಿರೇಮಠ ನ್ಯಾಯಾಲಯಕ್ಕಿಂತ ದೊಡ್ಡವರೆ- ಉಪೇಂದ್ರ ಪ್ರಶ್ನೆ

ಎಸ್.ಆರ್.ಹಿರೇಮಠ ನ್ಯಾಯಾಲಯಕ್ಕಿಂತ ದೊಡ್ಡವರೆ- ಉಪೇಂದ್ರ ಪ್ರಶ್ನೆ
ಬೆಳಗಾವಿ , ಸೋಮವಾರ, 11 ಡಿಸೆಂಬರ್ 2017 (15:26 IST)
ರೆಸಾರ್ಟ್ ವಿಷಯದಲ್ಲಿ ಮೂಗು ತೂರಿಸುತ್ತಿರುವ ಸಮಾಜ ಪರಿವರ್ತನಾ ಆಂದೋಲನ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ನ್ಯಾಯಾಲಯಕ್ಕಿಂತ ದೊಡ್ಡವರೆ ಎಂದು ನಟ ಹಾಗೂ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಉಪೇಂದ್ರ ಪ್ರಶ್ನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಭೂಮಿಯಲ್ಲಿ ರೆಸಾರ್ಟ ಕಟ್ಟಿದ್ದಾರೆ ಎಂದು ಎಸ್.ಆರ್.ಹಿರೇಮಠ ಅವರು ಈಗಾಗಲೇ ನ್ಯಾಯಲಯದ ಮೊರೆ ಹೋಗಿದ್ದಾರೆ. ಅಲ್ಲದೇ ನ್ಯಾಯಾಲಯ ತೀರ್ಪು ಕೂಡ ನೀಡಿದೆ. ಆದರೆ, ಹಿರೇಮಠ ಅವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಈಗ ಕೆಪಿಜಿಪಿ ಪಕ್ಷದ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಇಳಿದಾಗಿದೆ. ಈಗ ಬೆಕ್ಕಿಗೆ ಗಂಟೆ ಕೂಡ ಕಟ್ಟಲಾಗಿದೆ. ಗಂಟೆಯನ್ನು ಬಾರಿಸುವ ಮೂಲಕ ಜನರು ಪಕ್ಷಕ್ಕೆ ಆಶೀರ್ವಾದ ಮಾಡಬೇಕಿದೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರವಿ ಬೆಳಗೆರೆಗೆ ಭೂಗತ ನಂಟಿದೆ; ನನ್ನ ಜೀವಕ್ಕೆ ಅಪಾಯವಿದೆ