Publish Date: Mon, 21 Jan 2019 (19:37 IST)
Updated Date: Mon, 21 Jan 2019 (19:40 IST)
ಸಿದ್ದಗಂಗಾ ಶ್ರೀ ಗಳ ಲಿಂಗೈಕ್ಯ ಹಿನ್ನಲೆಯಲ್ಲಿ ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ತುಮಕೂರು ಸಿದ್ದಗಂಗಾ ಮಠದ ಶ್ರೀ ಗಳ ಅಗಲಿಕೆ ಭರಿಸುವ ಶಕ್ತಿ ಭಗವಂತ ಭಕ್ತಾದಿಗಳಿಗೆ ನೀಡಲಿ. ಶ್ರೀ ಗಳಿಗೂ ಹುಕ್ಕೇರಿ ಮಠಕ್ಕೆ ಹಳೆಯ ನಂಟು ಇತ್ತು. ಈ ಹಿಂದೆ ಮಠಕ್ಕೆ ಭೇಟಿ ನೀಡಿದ್ದರು ಶ್ರೀ ಗಳು.
ರಾಜ್ಯದಲ್ಲಿ ಮೊದಲಿಗೆ ದಾಸೋಹ ಶುರು ಮಾಡಿದ್ದೇ ಶಿವಕುಮಾರ ಸ್ವಾಮಿಗಳು. ಶ್ರೀ ಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ.