Publish Date: Mon, 21 Jan 2019 (17:56 IST)
Updated Date: Mon, 21 Jan 2019 (17:57 IST)
ಸರಕಾರದಿಂದ ಮಾಡಲು ಆಗದ ಕೆಲಸವನ್ನು ತುಮಕೂರು ಸಿದ್ದಗಂಗಾ ಮಠದ ಶ್ರೀಗಳು ಮಾಡುತ್ತಿದ್ದರು ಎಂದು ಸಂಸದರು ಹೇಳಿದ್ದಾರೆ.
ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಹೇಳಿಕೆ ನೀಡಿದ್ದು, ಈ ಹಿಂದೆ ನಾನು ಸಮಾಜ ಕಲ್ಯಾಣ ಇಲಾಖೆ ಸಚಿವನಿದ್ದಾಗ ಮಠಕ್ಕೆ ಒಮ್ಮೆ ಭೇಟಿ ನೀಡಿದ್ದೆ. ಅಲ್ಲಿ ಮೂರು ಸಾವಿರ ಮಕ್ಕಳು ಒಂದೇ ಕಡೆ ಕುಳಿತು ಊಟ ಮಾಡುವದು ನೋಡಿ ನನಗೆ ಆಶ್ಚರ್ಯವಾಯಿತು. ಸರ್ಕಾರದಿಂದ ಮಾಡಲಾಗದ ಕಾರ್ಯವನ್ನು ಅಂದಿನ ದಿನದಲ್ಲಿ ಅವರು ಮಾಡುತ್ತಿದ್ದರು ಎಂದು ಸ್ಮರಿಸಿದರು.
ಸ್ವಾಮೀಜಿಗಳಿಗೆ ದೇವರು ಇನ್ನಷ್ಟು ಆಯುರ್ ಆರೋಗ್ಯವನ್ನು ಕೊಟ್ಟು ಕಾಪಾಡಬೇಕಿತ್ತು ಎಂದ ಅವರು, ಸಿದ್ದಗಂಗಾ ಶ್ರೀ ಗಳಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಈ ಕುರಿತು ಖುದ್ದಾಗಿ ಪ್ರಧಾನಿಗೆ ಭೇಟಿ ಆಗಿ ಮಾತನಾಡುತ್ತೇನೆ ಎಂದು ಹೇಳಿದರು.