Select Your Language

Notifications

webdunia
webdunia
webdunia
webdunia

ಪರೇಶ್ ಸಾವಿಗೆ ಟ್ವಿಸ್ಟ್ ನೀಡುವ ಆರೋಪ ಮಾಡಿದ ಶೋಭಾ ಕರಂದ್ಲಾಜೆ

ಪರೇಶ್ ಸಾವಿಗೆ ಟ್ವಿಸ್ಟ್ ನೀಡುವ ಆರೋಪ ಮಾಡಿದ ಶೋಭಾ ಕರಂದ್ಲಾಜೆ
ಶಿರಸಿ , ಬುಧವಾರ, 13 ಡಿಸೆಂಬರ್ 2017 (10:27 IST)
ಶಿರಸಿ: ಪರೇಶ್ ಸಾವಿನ ಪ್ರಕರಣದ ಹಿನ್ನಲೆಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಶಿರಸಿ ತಣ್ಣಗಾಗುತ್ತಿರುವಂತೆ ಸಂಸದೆ ಶೋಭಾ ಕರಂದ್ಲಾಜೆ ಹೊಸದೊಂದು ಆರೋಪ ಮಾಡಿದ್ದಾರೆ.
 

ಪರೇಶ್ ಸಾವಿಗೆ ಐಸಿಸ್ ಉಗ್ರರ ನಂಟಿದೆ ಎಂದು ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ. ಪರೇಶ್ ಕೈಯಲ್ಲಿ ರಾಮ ಎನ್ನುವ ಹಚ್ಚೆ ಇತ್ತು. ಅದನ್ನು ಕೆತ್ತಿ ತೆಗೆಯಲಾಗಿದೆ. ಇನ್ನು ಸಾವಿಗೆ ಮುನ್ನ ಆತನ ಬಾಯಿಗೆ ಬಟ್ಟೆ ತುರುಕಿದ ಗಾಯಗಳಿತ್ತು. ಕಣ್ಣು ಬಿಟ್ಟು ದೇಹದ ಬೇರೆಲ್ಲಾ ಭಾಗಗಳೂ ಗುರುತು ಸಿಗದಂತೆ ಸುಟ್ಟು ಹಾಕಲಾಗಿತ್ತು ಎಂದು ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.

ರಾಜ್ಯ ಸರ್ಕಾರದ ಭದ್ರತಾ ವೈಫಲ್ಯವಿದು. ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಿಗ್ಗೆ ಎಸಿಬಿ ಅವರಿಂದ ಅಧಿಕಾರಿಗಳ ಮನೆಯ ಮೇಲೆ ದಾಳಿ