Select Your Language

Notifications

webdunia
webdunia
webdunia
webdunia

ಅಯ್ಯರ್ ಅಮಾನತು ಕಣ್ಣೊರೆಸುವ ತಂತ್ರವೆಂದ ಶೋಭಾ

ಅಯ್ಯರ್ ಅಮಾನತು ಕಣ್ಣೊರೆಸುವ ತಂತ್ರವೆಂದ ಶೋಭಾ
ಉಡುಪಿ , ಶುಕ್ರವಾರ, 8 ಡಿಸೆಂಬರ್ 2017 (17:32 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನೀಚ ಎಂದು ಕರೆದಿರುವ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರನ್ನು ಅಮಾನತು ಮಾಡುವ ಮೂಲಕ ಕಾಂಗ್ರೆಸ್ ಕಣ್ಣೊರೆಸುವ ತಂತ್ರವನ್ನು ಅನುಸರಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀಚ ಎಂಬ ಪದ ಬಳಕೆ ಮಾಡಿರುವ ಬಗ್ಗೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಣಿಶಂಕರ್ ಅಯ್ಯರ್ ಮಾತನಾಡಿದ್ದು, ಕಾಂಗ್ರೆಸ್‍ನ ಮಾನಸಿಕ ಮನಸ್ಥಿತಿಯನ್ನು ತೋರಿಸುತ್ತದೆ. ಅವರಿಗೆ ಅಧಿಕಾರ ಇಲ್ಲದಿದ್ದಾಗ ಮಾತ್ರ ಚಡಪಡಿಕೆಯ ಮಾತು ಬರುತ್ತದೆ ಎಂದು ಕಿಡಿಕಾರಿದ್ದಾರೆ.
 
ಭಾರತವನ್ನು ಕಾಂಗ್ರೆಸ್‍ನ ವಂಶಾಡಳಿತಕ್ಕೆ ಬರೆದುಕೊಟ್ಟಿಲ್ಲ. ಅಧಿಕಾರ ಇಲ್ಲದಿದ್ದಾಗ ಇವರಿಗೆ ಚಡಪಡಿಕೆ ಶುರುವಾಗುತ್ತದೆ. ಅದರ ಪ್ರತಿಫಲವೇ ನೀಚ ಎಂಬ ಶಬ್ದವನ್ನು ಬಳಸಿರುವುದು. ಗುಜರಾತಿನ ಜನರು ಕಾಂಗ್ರೆಸ್‍ಗೆ ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಪರವಾಗಿ ಮಾನತನಾಡಿದ್ದಕ್ಕೆ ತಂದೆಯಿಂದ ಮಗಳ ಕೊಲೆ