Publish Date: Fri, 06 Sep 2019 (17:13 IST)
Updated Date: Fri, 06 Sep 2019 (17:15 IST)
ಅನಾರೋಗ್ಯಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರೋ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ತಮ್ಮ ಹರಕೆಯನ್ನ ತೀರಿಸಿದ್ದಾರೆ.
ಲಂಡನ್ ಗೆ ಕೈ ಯ ಚಿಕಿತ್ಸೆಗಾಗಿ ತೆರಳಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದ ಹ್ಯಾಟ್ರಿಕ್ ಹಿರೋ ಈಗ ಗುಣಮುಖರಾಗಿದ್ದಾರೆ. ಹೀಗಾಗಿ ತಾವು ಹೊತ್ತಿದ್ದ ಹರಕೆಯನ್ನು ತೀರಿಸಿದ್ದಾರೆ.
ಚಾಮರಾಜನಗರದ ಹನೂರು ಹತ್ತಿರದ ಮಲೆ ಮಹಾದೇಶ್ವರ ಬೆಟ್ಟಕ್ಕೆ ಬಂದು ದರ್ಶನ ಪಡೆದುಕೊಂಡಿದ್ದಾರೆ.
ನೆಚ್ಚಿನ ಅಭಿಮಾನಿಗಳನ್ನ ಕಂಡ ಶಿವಣ್ಣ ಖುಷ್ ಆದರೆ ಸೆಲ್ಫಿ ತೆಗೆದುಕೊಳ್ಳೋಕೆ ಯುವಜನತೆ ಮುಂದಾದ್ರು.