Select Your Language

Notifications

webdunia
webdunia
webdunia
webdunia

ಅಪಘಾತದಲ್ಲಿ ಸಾವನ್ನಪ್ಪಿದ 13 ಜನರ ಕುಟುಂಬಕ್ಕೆ ಧನ ಸಹಾಯ ಮಾಡಿದ ಶಿವಣ್ಣ-ಗೀತಾ

ಅಪಘಾತದಲ್ಲಿ ಸಾವನ್ನಪ್ಪಿದ 13 ಜನರ ಕುಟುಂಬಕ್ಕೆ ಧನ ಸಹಾಯ ಮಾಡಿದ ಶಿವಣ್ಣ-ಗೀತಾ

Sampriya

ಶಿವಮೊಗ್ಗ , ಸೋಮವಾರ, 8 ಜುಲೈ 2024 (18:02 IST)
Photo Courtesy X
ಶಿವಮೊಗ್ಗ: ಹಾವೇರಿಯಲ್ಲಿ ನಡೆದ ಅಪಘಾತದಲ್ಲಿ ಮೃತರಾದ ಭದ್ರಾವತಿ ತಾಲ್ಲೂಕಿನ ಎಮ್ಮೇಹಟ್ಟಿಯ 13 ಮಂದಿ ಹಾಗೂ ಇಬ್ಬರು ಗಾಯಾಳುಗಳ ಕುಟುಂಬವನ್ನು ನಟ ಶಿವರಾಜಕುಮಾರ್ ಹಾಗೂ ಗೀತಾ ದಂಪತಿ ಇಂದು ಭೇಟಿಯಾಗಿ 13 ಲಕ್ಷ ಪರಿಹಾರ ನೀಡಿದರು.

ಮಳೆಯ ನಡುವೆಯೂ ಎಮ್ಮೇಹಟ್ಟಿಯ ಮೃತರ ಮನೆಗಳಿಗೆ ಭೇಟಿ ನೀಡಿದ ಶಿವರಾಜ್‌ಕುಮಾರ್ ಗೀತಾ ದಂಪತಿ ಮೃತರ ಕುಟುಂಬಗಳಿಗೆ ಸಾಂತ್ವನ ತುಂಬಿದರು. ಈ ವೇಳೆ ಗಾಯಾಳುಗಳ ಪರಿಸ್ಥಿತಿ ಹಾಗೂ ಮೃತರ ಕುಟುಂಬದವರ ಪರಿಸ್ಥಿತಿಯನ್ನು ವಿಚಾರಿಸಿದರು.

ಅಪಘಾತದಲ್ಲಿ ಸಾವಿಗೀಡಾದ 13 ಮಂದಿಗೆ ₹10 ಲಕ್ಷ ಹಾಗೂ ಬದುಕುಳಿದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ಚಿಕಿತ್ಸಾ ವೆಚ್ಚವಾಗಿ ತಲಾ ₹1.5 ಲಕ್ಷ ನಗದು ಹಣ ನೀಡಿದರು.

ನಂತರ ಮಾತನಾಡಿದ ಶಿವರಾಜ್‌ಕುಮಾರ್‌ ಅವರು, ಧನ ಸಹಾಯ ಮಾಡಿದರು, ಕುಟುಂಬಸ್ಥರಿಗೆ ಶಾಶ್ವತ ನೆರವು ಕೊಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಾವಿಗೀಡಾದವರ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ಹೇಳಿದರು.

ಅಪಘಾತದ ನಂತರ ಸಾವಿಗೀಡಾದವರ ಕುಟುಂಬಗಳಿಗೆ ನೆರವು ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಗ್ರಾಮಸ್ಥರು ತೋರಿದ ಕಾಳಜಿಯನ್ನು ಗೀತಾ ಶಿವರಾಜಕುಮಾರ್ ಶ್ಲಾಘಿಸಿದರು.

ಕುಟುಂಬದ ಎಲ್ಲ ಸದಸ್ಯರನ್ನು ಕಳೆದುಕೊಂಡಿರುವ ಅಂಗವಿಕಲೆ ಅರ್ಪಿತಾ ಭವಿಷ್ಯಕ್ಕೆ ನೆರವಾಗುವ ಭರವಸೆ ನೀಡಿದರು.

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಡಿ.ಮಂಜುನಾಥ್ ಈ ವೇಳೆ ಇದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಕ್ಕೆ ಹಾರುವ ಮೋದಿಗೆ ಮಣಿಪುರ, ಹತ್ರಾಸ್‌ ಸಂತ್ರಸ್ತರ ಭೇಟಿಗೆ ಸಮಯವಿಲ್ಲ: ಸೌರಭ್ ಭಾರದ್ವಾಜ್