Select Your Language

Notifications

webdunia
webdunia
webdunia
webdunia

ರೈತರಿಗೆ ಕೆಂಪು ನೋಟು ಕೊಟ್ಟು ವೋಟು ಹಾಕಿಸಿಕೊಳ್ಳುತ್ತಿದ್ದೀರಾ ಮೋದಿಯವರೇ?-ಶಿವಲಿಂಗೇಗೌಡ ವ್ಯಂಗ್ಯ

ರೈತರಿಗೆ ಕೆಂಪು ನೋಟು ಕೊಟ್ಟು ವೋಟು ಹಾಕಿಸಿಕೊಳ್ಳುತ್ತಿದ್ದೀರಾ ಮೋದಿಯವರೇ?-ಶಿವಲಿಂಗೇಗೌಡ ವ್ಯಂಗ್ಯ
ಹಾಸನ , ಗುರುವಾರ, 28 ಫೆಬ್ರವರಿ 2019 (08:25 IST)
ಹಾಸನ : ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಪ್ರಧಾನಿ ಮೋದಿ ಅವರು ರೈತರಿಗೆ 2000 ರೂ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗ ರೈತರ ಬಗ್ಗೆ ಕಾಳಜಿ ಬಂದಿದೆ ಎಂದು ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ವ್ಯಂಗ್ಯವಾಡಿದ್ದಾರೆ.


ಫೆ 1 ರಂದು ಮಂಡನೆಯಾದ ಮಧ್ಯಂತರ ಬಜೆಟ್ ನಲ್ಲಿ 5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಪ್ರತಿ ರೈತರಿಗೆ ವಾರ್ಷಿಕ 6000ರೂ ನೀಡಲಾಗುವುದು. ಪ್ರತಿ 4 ತಿಂಗಳಿಗೊಮ್ಮೆ  2000 ರೂ. ರೈತರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಪ್ರಧಾನಿ ಮೋದಿ ಫೆ. 24 ರಂದು ರೈತರಿಗೆ ಚೆಕ್ ನೀಡುವುದರ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದರು.


ಈ ಬಗ್ಗೆ ಮಾತನಾಡಿದ ಶಿವಲಿಂಗೇಗೌಡ,’ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗ ರೈತರ ಪರ ಕಾಳಜಿ ಬಂದಿದ್ದು, ಈಗ ರೈತರ ಖಾತೆಗೆ ಎರಡು ಸಾವಿರ ರೂ. ಹಣ ಜಮಾ ಮಾಡ್ತಿದ್ದಾರೆ. ಸರ್ಕಾರದ ಹಣವನ್ನ ರೈತ್ರಿಗೆ ಹಂಚುತ್ತಿದ್ದೀರಿ, ಎರಡು ಸಾವಿರ ರೂಪಾಯಿ ಕೆಂಪು ನೋಟು ಕೊಟ್ಟು ವೋಟು ಹಾಕಿಸಿಕೊಳ್ಳುತ್ತಿದ್ದೀರಾ? ಮೋದಿಯವರೇ ಎಂದು ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಸ್ಟ್ರೈಕ್ ಬಗ್ಗೆ ಬಿಜೆಪಿಯವರ ಸಂಭ್ರಮ ಕಂಡು ವ್ಯಂಗ್ಯವಾಡಿದ ಸಿಎಂ ಕುಮಾರಸ್ವಾಮಿ