Select Your Language

Notifications

webdunia
webdunia
webdunia
webdunia

ಮಾರ್ಚ್ ಅಂತ್ಯದೊಳಗೆ ರೈತರಿಗೆ ಸಿಹಿಸುದ್ದಿ ನೀಡಲಿದೆ ರಾಜ್ಯಸರ್ಕಾರ

ಮಾರ್ಚ್ ಅಂತ್ಯದೊಳಗೆ ರೈತರಿಗೆ ಸಿಹಿಸುದ್ದಿ  ನೀಡಲಿದೆ ರಾಜ್ಯಸರ್ಕಾರ
ಸಕಲೇಶಪುರ , ಬುಧವಾರ, 27 ಫೆಬ್ರವರಿ 2019 (08:19 IST)
ಸಕಲೇಶಪುರ : ಮಾರ್ಚ್ ಅಂತ್ಯದೊಳಗೆ ಸುಮಾರು ಹತ್ತು ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡುವ ಗುರಿ ಹೊಂದಿದೆ ಎಂದು ಹೇಳುವುದರ ಮೂಲಕ ಸಿಎಂ ಹೆಚ್.ಡಿ. ಕುಮಾರಸ್ವಾಮಿ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ.


ಮಂಗಳವಾರ ಪಟ್ಟಣದಲ್ಲಿ ನಡೆದ ಎತ್ತಿನಹೊಳೆ ಯೋಜನೆಯ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾರ್ಚ್ ಅಂತ್ಯದೊಳಗೆ ರೈತರ 10 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಗುರಿ ಹೊಂದಿದ್ದೇವೆ. ಇದರಲ್ಲಿ ಈಗಾಗಲೇ 4,130 ಕೋಟಿ ರೂ. ಬಿಡುಗಡೆಯಾಗಿದೆ. ಇದು 6.40 ಲಕ್ಷ ಕುಟುಂಬಗಳಿಗೆ ಸಂದಾಯವಾಗಿದೆ ಎಂದು ಹೇಳಿದ್ದಾರೆ


ನಮ್ಮ ಸರ್ಕಾರವು ಅನ್ನದಾತನ ಪರವಾಗಿದ್ದು. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ರೈತರು ಆತಂಕಕ್ಕೊಳಗಾಗಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ರೈತರಿಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ-ಆರೆಸ್ಸೆಸ್‌ನದ್ದು ದ್ವೇಷ ಮತ್ತು ಹಿಂಸೆಯ ಸಿದ್ಧಾಂತ- ರಾಹುಲ್ ಗಾಂಧಿ