Select Your Language

Notifications

webdunia
webdunia
webdunia
webdunia

ಬಹಮನಿ ಸುಲ್ತಾನರ ಉತ್ಸವ ಮಾಡುವುದರಲ್ಲಿ ತಪ್ಪೇನಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆಗೆ ಶಿಲ್ಪಾ ಗಣೇಶ್ ಕೊಟ್ಟ ಉತ್ತರವೇನು?

ಬಹಮನಿ ಸುಲ್ತಾನರ ಉತ್ಸವ ಮಾಡುವುದರಲ್ಲಿ ತಪ್ಪೇನಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆಗೆ ಶಿಲ್ಪಾ ಗಣೇಶ್ ಕೊಟ್ಟ ಉತ್ತರವೇನು?
ಬೆಂಗಳೂರು , ಶನಿವಾರ, 17 ಫೆಬ್ರವರಿ 2018 (08:07 IST)
ಬೆಂಗಳೂರು: ಬಹಮನಿ ಸುಲ್ತಾನರ ಉತ್ಸವ ಮಾಡುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಸಂಸದ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ತಿರುಗೇಟು ನೀಡಿದ್ದಾರೆ.
 

ಬಹಮನಿ ಸುಲ್ತಾನರ ಉತ್ಸವ ಆಚರಿಸಲು ಹೊರಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಕೊನೆಗೆ ವಿವಾದವಾಗುತ್ತಿದ್ದಂತೆ ನಿರ್ಧಾರದಿಂದ ಹಿಂದೆ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಮಲ್ಲಿಕಾರ್ಜುನ ಖರ್ಗೆ ಉತ್ಸವ ಮಾಡುವುದು ತಪ್ಪಲ್ಲ ಎಂದಿದ್ದರು.

ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ಶಿಲ್ಪಾ ಗಣೇಶ್, ಅಪ್ಪನ ತಿಥಿ ಕಾರ್ಯ ಮಕ್ಕಳು ಮಾಡಿದರೆ ತಪ್ಪಿಲ್ಲ. ಊರಿನವರಿಗೂ ಮಾಡಿ ಎನ್ನುವುದು ತಪ್ಪು. ನಿಮಗೆ ಬೇಕಿದ್ದರೆ ಉತ್ಸವ ಮಾಡಿಕೊಳ್ಳಿ. ಜನರ ದುಡ್ಡು ಖರ್ಚು ಮಾಡಬೇಡಿ ಅಷ್ಟೇ ಎಂದು ಶಿಲ್ಪಾ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ಸರ್ಕಾರದಿಂದ ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ; ಕೈ ಬಿಟ್ಟ ಸುಪ್ರೀಂ