Webdunia - Bharat's app for daily news and videos

Install App

ಮದುವೆಯಾದ ಮರುದಿನವೇ ಆಕೆಗೆ ತಿಳಿಯಿತು ಗಂಡನ ಅಸಲಿಯತ್ತು...!

Webdunia
ಸೋಮವಾರ, 10 ಡಿಸೆಂಬರ್ 2018 (14:55 IST)
ಮಕ್ಕಳ ಮದುವೆ ವಿಷಯದಲ್ಲಿ ಆತುರ ಪಡುವ ಪೋಷಕರು ಈ ಸುದ್ದಿಯನ್ನು ಓದಲೇಬೇಕು. ಪೋಷಕರ ಆತುರಕ್ಕೆ ಒಬ್ಬಳೆ ಮಗಳ ಜೀವನ ಸರ್ವನಾಶವಾಗಿದೆ. ಮದುವೆಯಾಗಿ ಮೂರೇ ತಿಂಗಳಿಗೆ ಮುರಿದು ಬಿತ್ತು ಸಾಂಸಾರಿಕ ಜೀವನ. ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಯುವತಿಯ ಕಥೆ ಮುಂದೆ ಓದಿ…

 ಶ್ರೀಮಂತ ಮನೆತನದ ಹುಡುಗ ಸಿಕ್ಕ ಅಂತಾ ಲಕ್ಷ ಲಕ್ಷ ಹಣ ಖರ್ಚು ಮಾಡಿ ಇದ್ದ ಒಬ್ಬ ಮಗಳ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯಾದ ಮೂರೇ ತಿಂಗಳಲ್ಲಿ ಮಗಳ ಸಂಸಾರ ಮುರಿದುಬಿದ್ದಿದೆ. ಮಕ್ಕಳ ಮದುವೆ ವಿಷಯದಲ್ಲಿ ಆತುರ ಪಡುವ ಪೋಷಕರು ಈ ಸುದ್ದಿಯನ್ನ ನೋಡಲೇಬೇಕು. ತುಮಕೂರಿನ ದಿಬ್ಬೂರು ನಿವಾಸಿ ನರಸಿಂಹಮೂರ್ತಿ, ಮಂಜುಳಾ ದಂಪತಿಯ ಒಬ್ಬಳೇ ಮಗಳು ಅಶ್ವಿನಿ. ಈಕೆ ಇನ್ನೂ ಪಿಯುಸಿ ಓದುವಾಗಲೇ ಶ್ರೀಮಂತ ಮನೆತನದ ವರ ಸಿಕ್ಕ ಅಂತಾ ಹಿಂದು- ಮುಂದು ನೋಡದೇ ಮದುವೆ ಮಾಡಿಕೊಟ್ಟಿದ್ದಾರೆ. ಲಕ್ಷ ಲಕ್ಷ ಹಣ ಖರ್ಚು ಮಾಡಿ ವರದಕ್ಷಿಣೆಯನ್ನು ನೀಡಿ ಅದ್ದೂರಿಯಾಗಿ ಚಂದ್ರಶೇಖರ್ ಎಂಬಾತನ ಜೊತೆ ಮದುವೆ ಮಾಡಿಕೊಟ್ಟಿದ್ದಾರೆ.

ಆದರೆ ಮದುವೆಯಾದ ಮರುದಿನವೇ ಚಂದ್ರಶೇಖರ್ ನ ಅಸಲಿಯತ್ತು ತಿಳಿದು ಬಂದಿದೆ. ಅಶ್ವಿನಿ ಜೊತೆ ಸಂಸಾರ ನಡೆಸದ ಪತಿ, ಪ್ರೀತಿ ವಿಶ್ವಾಸದಿಂದ ಕಾಣದೇ ನಿರ್ಲಕ್ಷ್ಯ ಮಾಡಿದ್ದಾನೆ. ಮದುವೆಯಾಗಿ ಆರು ತಿಂಗಳಾದರೂ ಪತ್ನಿ ಜೊತೆ ದೈಹಿಕ ಸಂಪರ್ಕ ಕೂಡ ಇಟ್ಟುಕೊಂಡಿಲ್ಲವಂತೆ. ಪ್ರಶ್ನಿಸಿದ್ರೆ ಸಕಾರಣಗಳನ್ನ ಕೊಟ್ಟು ಪುಸಲಾಯಿಸುತ್ತಾನಂತೆ. ಒತ್ತಾಯ ಮಾಡಿದ್ದಕ್ಕೆ ನಿನಗೆ ಯಾರ ಜೊತೆಯಾದ್ರೂ ಅಕ್ರಮ ಸಂಬಂಧ ವಿದ್ರೆ ಇಟ್ಕೊ ಅಂತಾನಂತೆ. ಇಲ್ಲಾ ನಾನೆ ಮುಂದೆ ನಿಂತು ಮದುವೆ ಮಾಡುತ್ತೆನೆ ಎನ್ನುತ್ತಾನಂತೆ.

ಹೀಗಾಗಿ ಪತಿ‌ ಚಂದ್ರಶೇಖರ್ ನ ವರ್ತನೆಯಿಂದ ಬೇಸತ್ತ ಪತ್ನಿ ಅಶ್ವಿನಿ‌ ಪೊಲೀಸರ ಮೊರೆ ಹೊಗಿದ್ದಾಳೆ. ತನ್ನ ಗಂಡ ಚಂದ್ರ ಶೇಖರ್ ಗಂಡಸೇ ಅಲ್ಲಾ ಅಂತಾ ಗಂಭೀರವಾಗಿ ಆರೋಪಿಸಿದ್ದು, ಆತನಿಂದ ನನ್ನ ಜೀವನ ಹಾಳಾಗಿದೆ. ನನಗೆ ನ್ಯಾಯ ಕೊಡಿಸಿ ಎಂದಿದ್ದಾಳೆ. ಈ ಕುರಿತು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

Karnataka Weather: ಬೆಂಗಳೂರಿಗರಿಗೂ ಎಚ್ಚರ, ರಾಜ್ಯದ ಹವಾಮಾನ ಪರಿಸ್ಥಿತಿ ಹೇಗಿದೆ ನೋಡಿ

ಮುಂದಿನ ಸುದ್ದಿ
Show comments