Webdunia - Bharat's app for daily news and videos

Install App

ಮದುವೆಯಾದ ಮರುದಿನವೇ ಆಕೆಗೆ ತಿಳಿಯಿತು ಗಂಡನ ಅಸಲಿಯತ್ತು...!

Webdunia
ಸೋಮವಾರ, 10 ಡಿಸೆಂಬರ್ 2018 (14:55 IST)
ಮಕ್ಕಳ ಮದುವೆ ವಿಷಯದಲ್ಲಿ ಆತುರ ಪಡುವ ಪೋಷಕರು ಈ ಸುದ್ದಿಯನ್ನು ಓದಲೇಬೇಕು. ಪೋಷಕರ ಆತುರಕ್ಕೆ ಒಬ್ಬಳೆ ಮಗಳ ಜೀವನ ಸರ್ವನಾಶವಾಗಿದೆ. ಮದುವೆಯಾಗಿ ಮೂರೇ ತಿಂಗಳಿಗೆ ಮುರಿದು ಬಿತ್ತು ಸಾಂಸಾರಿಕ ಜೀವನ. ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಯುವತಿಯ ಕಥೆ ಮುಂದೆ ಓದಿ…

 ಶ್ರೀಮಂತ ಮನೆತನದ ಹುಡುಗ ಸಿಕ್ಕ ಅಂತಾ ಲಕ್ಷ ಲಕ್ಷ ಹಣ ಖರ್ಚು ಮಾಡಿ ಇದ್ದ ಒಬ್ಬ ಮಗಳ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯಾದ ಮೂರೇ ತಿಂಗಳಲ್ಲಿ ಮಗಳ ಸಂಸಾರ ಮುರಿದುಬಿದ್ದಿದೆ. ಮಕ್ಕಳ ಮದುವೆ ವಿಷಯದಲ್ಲಿ ಆತುರ ಪಡುವ ಪೋಷಕರು ಈ ಸುದ್ದಿಯನ್ನ ನೋಡಲೇಬೇಕು. ತುಮಕೂರಿನ ದಿಬ್ಬೂರು ನಿವಾಸಿ ನರಸಿಂಹಮೂರ್ತಿ, ಮಂಜುಳಾ ದಂಪತಿಯ ಒಬ್ಬಳೇ ಮಗಳು ಅಶ್ವಿನಿ. ಈಕೆ ಇನ್ನೂ ಪಿಯುಸಿ ಓದುವಾಗಲೇ ಶ್ರೀಮಂತ ಮನೆತನದ ವರ ಸಿಕ್ಕ ಅಂತಾ ಹಿಂದು- ಮುಂದು ನೋಡದೇ ಮದುವೆ ಮಾಡಿಕೊಟ್ಟಿದ್ದಾರೆ. ಲಕ್ಷ ಲಕ್ಷ ಹಣ ಖರ್ಚು ಮಾಡಿ ವರದಕ್ಷಿಣೆಯನ್ನು ನೀಡಿ ಅದ್ದೂರಿಯಾಗಿ ಚಂದ್ರಶೇಖರ್ ಎಂಬಾತನ ಜೊತೆ ಮದುವೆ ಮಾಡಿಕೊಟ್ಟಿದ್ದಾರೆ.

ಆದರೆ ಮದುವೆಯಾದ ಮರುದಿನವೇ ಚಂದ್ರಶೇಖರ್ ನ ಅಸಲಿಯತ್ತು ತಿಳಿದು ಬಂದಿದೆ. ಅಶ್ವಿನಿ ಜೊತೆ ಸಂಸಾರ ನಡೆಸದ ಪತಿ, ಪ್ರೀತಿ ವಿಶ್ವಾಸದಿಂದ ಕಾಣದೇ ನಿರ್ಲಕ್ಷ್ಯ ಮಾಡಿದ್ದಾನೆ. ಮದುವೆಯಾಗಿ ಆರು ತಿಂಗಳಾದರೂ ಪತ್ನಿ ಜೊತೆ ದೈಹಿಕ ಸಂಪರ್ಕ ಕೂಡ ಇಟ್ಟುಕೊಂಡಿಲ್ಲವಂತೆ. ಪ್ರಶ್ನಿಸಿದ್ರೆ ಸಕಾರಣಗಳನ್ನ ಕೊಟ್ಟು ಪುಸಲಾಯಿಸುತ್ತಾನಂತೆ. ಒತ್ತಾಯ ಮಾಡಿದ್ದಕ್ಕೆ ನಿನಗೆ ಯಾರ ಜೊತೆಯಾದ್ರೂ ಅಕ್ರಮ ಸಂಬಂಧ ವಿದ್ರೆ ಇಟ್ಕೊ ಅಂತಾನಂತೆ. ಇಲ್ಲಾ ನಾನೆ ಮುಂದೆ ನಿಂತು ಮದುವೆ ಮಾಡುತ್ತೆನೆ ಎನ್ನುತ್ತಾನಂತೆ.

ಹೀಗಾಗಿ ಪತಿ‌ ಚಂದ್ರಶೇಖರ್ ನ ವರ್ತನೆಯಿಂದ ಬೇಸತ್ತ ಪತ್ನಿ ಅಶ್ವಿನಿ‌ ಪೊಲೀಸರ ಮೊರೆ ಹೊಗಿದ್ದಾಳೆ. ತನ್ನ ಗಂಡ ಚಂದ್ರ ಶೇಖರ್ ಗಂಡಸೇ ಅಲ್ಲಾ ಅಂತಾ ಗಂಭೀರವಾಗಿ ಆರೋಪಿಸಿದ್ದು, ಆತನಿಂದ ನನ್ನ ಜೀವನ ಹಾಳಾಗಿದೆ. ನನಗೆ ನ್ಯಾಯ ಕೊಡಿಸಿ ಎಂದಿದ್ದಾಳೆ. ಈ ಕುರಿತು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments