ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯಲ್ಲ.- ಬಿಜೆಪಿ ನಾಯಕರಿಗೆ ಶರತ್ ಬಚ್ಚೇಗೌಡ ಸವಾಲು

Webdunia
ಗುರುವಾರ, 31 ಅಕ್ಟೋಬರ್ 2019 (11:35 IST)
ಹೊಸಕೋಟೆ: ನಾನು ಯಾವ ಒತ್ತಡಕ್ಕೂ ಜಗ್ಗುವುದಿಲ್ಲ ಬಗ್ಗೊದಿಲ್ಲ ಬಿಜೆಪಿ ನಾಯಕರಿಗೆ ಶರತ್ ಬಚ್ಚೇಗೌಡ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.




ನಂಗೆ ಮೋಸ ಆಗ್ತಿದೆ ಅಂತಾ ಯಾರ್ಯಾರೋ ಕಣ್ಣೀರು ಹಾಕಿದ್ದಾರಂತೆ. ಅವರಿಗೆಲ್ಲಾ ಏನು ಮೋಸ ಆಗಿದೆಯೋ ನನಗೆ ಗೊತ್ತಿಲ್ಲ. ಹೊಸಕೋಟೆ ಇತಿಹಾಸದಲ್ಲೇ ಇಲ್ಲಿಯವರೆಗೂ ಬೈ ಎಲೆಕ್ಷನ್ ನಡೆದಿಲ್ಲ. ಶರತ್ ಮೃದು ಸ್ವಭಾವದವನು, ಸಾಫ್ಟ್ ಆಗಿರ್ತಾನೆ . ಒತ್ತಡ, ಭಯಕ್ಕೆ ಮಣಿದು ಚುನಾವಣೆಯಿಂದ ಹಿಂದೆ ಸರಿಯುತ್ತಾನೆ ಹೀಗೆಲ್ಲಾ ನನ್ನ ಬಗ್ಗೆ ಕೆಲ ಜನರು ಅಪಪ್ರಚಾರ ಮಾಡುತ್ತಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯಲ್ಲ. ತಾಲೂಕಿನ ಸ್ವಾಭಿಮಾನಕ್ಕಾಗಿ, ಜನಕ್ಕೆ ನೀಡಿರೋ ಮಾತಿಗಾಗಿ ಚುನಾವಣೆಯಿಂದ ನಾನು ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದು ಶರತ್ ಬಚ್ಚೇಗೌಡ ಸ್ಪಷ್ಟವಾಗಿ ಹೇಳಿದ್ದಾರೆ.


ಬಚ್ಚೇಗೌಡರು ನಾನು ತಂದೆ ಮಕ್ಕಳಾದ್ರೂ ನಾವು ಒಟ್ಟಾಗಿ ಇರ್ತಿಲ್ಲ. ತಂದೆ ಬಚ್ಚೇಗೌಡರಿಗೆ ತೊಂದರೆ ಮಾಡ್ತಾರೆಂದು ಪ್ರಚಾರ ಮಾಡಿದ್ದಾರೆ. ನಾನು ಚುನಾವಣೆಗೆ ನಿಂತ್ರೆ ತಂದೆಗೆ ತೊಂದರೆಯಾಗುತ್ತೆ ಅಂತಿದ್ದಾರೆ. ತಂದೆಗೆ ತೊಂದರೆಯಾಗಬಾರದು ಅಂತ ಮನೆ ಬಿಟ್ಟು ಬಂದಿದ್ದೀನಿ. ಚುನಾವಣಾ ಪ್ರಚಾರಕ್ಕೆ ತಂದೆ ಬರದ ಕಾರಣ ನೀವೇ ನನ್ನ ತಂದೆ ತಾಯಿಯಾಗಿ ಪ್ರಚಾರ ಮಾಡಿ ಬೆಂಬಲ ನೀಡಿ ಎಂದು ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ನೆರೆಹೊರೆಯವರಿಗೆ ಈಗ್ಲೇ ಮೆಣಶಿನಕಾಯಿ ಇಟ್ಟಂಗೆ ಆಗಿರ್ಬೇಕು: ಪ್ರಿಯಾಂಕ್ ಖರ್ಗೆಗೆ ನಾರಾ ಲೋಕೇಶ್ ಟಾಂಗ್

ಶಾಲೆಗಳಲ್ಲಿ ಸಂಘಟನೆಗಳ ಚಟುವಟಿಕೆ ಇರಬಾರದು ಎಂದು ಹೇಳಿದ್ದೇ ಬಿಜೆಪಿಯವರು: ಪ್ರಿಯಾಂಕ್ ಖರ್ಗೆ ಬಾಂಬ್

ರಾಹುಲ್ ಗಾಂಧಿ, ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್

ಕಾಂಗ್ರೆಸ್ ನಲ್ಲಿ ಅಧಿಕಾರಿಗಳ ಸಾವಿಗೂ ಗ್ಯಾರಂಟಿ: ಆರ್ ಅಶೋಕ್

ಪ್ರಿಯಾಂಕ್ ಖರ್ಗೆಯನ್ನು ನಿಂದಿಸುವುದು ಸಭ್ಯತೆಯಲ್ಲ, ಅವರ ಜೊತೆ ನಾವಿದ್ದೇವೆ: ಕೃಷ್ಣಭೈರೇಗೌಡ

ಮುಂದಿನ ಸುದ್ದಿ
Show comments