Select Your Language

Notifications

webdunia
webdunia
webdunia
Sunday, 6 April 2025
webdunia

ಕಾಂಗ್ರೆಸ್ ಗೆ ಕೈ ಕೊಡುತ್ತಾರಾ ಏಳು ಶಾಸಕರು?

ಆನಂದ್ ಸಿಂಗ್
ಬೆಂಗಳೂರು , ಸೋಮವಾರ, 1 ಜುಲೈ 2019 (15:44 IST)
ಮೈತ್ರಿ ಸರಕಾರಕ್ಕೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿ ಶಾಕ್ ನೀಡಿದ್ದಾರೆ. ಇದರ ಬೆನ್ನಲ್ಲೆ ಅತೃಪ್ತ ಸಪ್ತ ಶಾಸಕರು ಅದೇ ಹಾದಿ ತುಳಿಯಲಿದ್ದಾರೆ.

ಕಾಂಗ್ರೆಸ್ ನಲ್ಲಿ ಹೊಗೆಯಾಡುತ್ತಿರುವ ಅತೃಪ್ತ ಶಾಸಕರು ಒಬ್ಬೊಬ್ಬರಾಗಿ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ.

ಹೀಗಾಗಿ ಕಾಂಗ್ರೆಸ್ ನ ಇನ್ನೂ ಏಳು ಜನ ಶಾಸಕರು ರಾಜೀನಾಮೆಗೆ ಮುಂದಾಗುವ ಮೂಲಕ ಮೈತ್ರಿ ಸರಕಾರಕ್ಕೆ ಶಾಕ್ ನೀಡಲು ಮುಂದಾಗಿದ್ದಾರೆ.

ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್ ಸೇರಿದಂತೆ ಇನ್ನಿತರ ಶಾಸಕರು ಕೈ ಪಡೆ ನಾಯಕರು ಹಾಗೂ ಮೈತ್ರಿ ಸರಕಾರದ ಮೇಲೆ ಮುನಿಸಿಕೊಂಡಿದ್ದಾರೆ.

ರಾಜೀನಾಮೆ ನೀಡುವ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರ ಬೀಳಿಸೋ ಯತ್ನ: ನಾವೇನು ಸನ್ಯಾಸಿಗಳಲ್ಲ ಅಂತಂದ ಯಡಿಯೂರಪ್ಪ