Select Your Language

Notifications

webdunia
webdunia
webdunia
webdunia

ರಾಜ್ಯದ ಜನರ ಸಂಕಷ್ಟ ನಿವಾರಣೆಗೆ ಸತ್ಯ ನಾರಾಯಣ ಪೂಜೆ ಮಾಡಿದ್ರು!

ರಾಜ್ಯದ ಜನರ ಸಂಕಷ್ಟ ನಿವಾರಣೆಗೆ ಸತ್ಯ ನಾರಾಯಣ ಪೂಜೆ ಮಾಡಿದ್ರು!
ರಾಯಚೂರು , ಮಂಗಳವಾರ, 21 ಆಗಸ್ಟ್ 2018 (15:09 IST)
ಮಳೆಯಿಂದ ತತ್ತರಿಸಿರುವ ಕೊಡಗಿನ ಜನರಿಗೆ ನೆಮ್ಮದಿ ಕೊಡಬೇಕು. ರಾಜ್ಯದ ಜನರ ಸಂಕಷ್ಟ ನಿವಾರಣೆಯಾಗಬೇಕೆಂದು ಪ್ರಾರ್ಥಿಸಿ ಸ್ವ ಸಹಾಯ ಸಂಘದ ಸದಸ್ಯರು ಶ್ರೀ ಸತ್ಯ ನಾರಾಯಣ ಪೂಜೆ ಮಾಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘದಿಂದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹಭಾಗಿತ್ವದಲ್ಲಿ  ಸಾಮೂಹಿಕ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಮಗಿ ಗ್ರಾಮದವರಿಂದ ಶರಣಬಸವೇಶ್ವರ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.  ನಾಡಿನಲ್ಲಿ ಹಲವು ಜಿಲ್ಲೆಗಳಲ್ಲಿ ಭೀಕರ ಬರಗಾಲ ಕಾಣಿಸಿಕೊಂಡು ಬರ ಅಳಿಯಬೇಕು. ಬರ ಪ್ರದೇಶದಲ್ಲಿ ಉತ್ತಮ ಮಳೆಯಾಗಬೇಕು. ಅಲ್ಲದೇ ಕೊಡಗಿನ ಜನರಿಗೆ ನೆಮ್ಮದಿ  ಜೀವನ ಸಾಗಿಸುವಂತಾಗಬೇಕು. ರಾಜ್ಯದ ಜನರ ಕಷ್ಟಗಳು ಬೇಗ  ದೂರವಾಗಲಿ ಎಂದು ಹೋಮ -ಹವನಗಳೊಂದಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ನವಜೋತ್ ಸಿಧು ತಲೆ ಕಡಿದು ತಂದವರಿಗೆ 5 ಲಕ್ಷ ರೂ. ಬಹುಮಾನ – ಬಜರಂಗದಳದಿಂದ ಘೋಷಣೆ