Webdunia - Bharat's app for daily news and videos

Install App

ಹಳೇ ಜಾತಿ ಸಮೀಕ್ಷೆಗೆ 187 ಕೋಟಿ ಖರ್ಚಾಯ್ತಲ್ಲಾ ಅಂದ್ರೆ ಅದೆಲ್ಲಾ ಪರ್ವಾಗಿಲ್ಲ ಎಂದ ಸತೀಶ್ ಜಾರಕಿಹೊಳಿ

Krishnaveni K
ಬುಧವಾರ, 11 ಜೂನ್ 2025 (12:22 IST)
ಬೆಂಗಳೂರು: ಹಳೆ ಜಾತಿ ಸಮೀಕ್ಷೆಗೆ 187 ಕೋಟಿ ಖರ್ಚು ಮಾಡಿದ್ದು ವೇಸ್ಟ್ ಆಯ್ತಲ್ಲಾ ಎಂದು ಸಚಿವ ಸತೀಶ್ ಜಾರಕಿಹೊಳಿಯನ್ನು ಕೇಳಿದಾಗ ಸ್ವಲ್ಪ ಖರ್ಚಾಗ್ತದೆ ಅದೆಲ್ಲಾ ಪರ್ವಾಗಿಲ್ಲ ಎಂದಿದ್ದಾರೆ.

10 ವರ್ಷದ ಹಿಂದೆ ನಡೆದಿದ್ದ ಜಾತಿ ಸಮೀಕ್ಷೆ ವರದಿ ಬಗ್ಗೆ ಅಪಸ್ವರಗಳು ಕೇಳಿಬಂದಿದ್ದವು. ಹೀಗಾಗಿ ಆ ಜಾತಿ ಸಮೀಕ್ಷೆ ಬೇಡ. ಹೊಸದಾಗಿ ಜಾತಿ ಸಮೀಕ್ಷೆ ಮಾಡಿ ಎಂದು ನಿನ್ನೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗೆ ಸೂಚನೆ ನೀಡಿತ್ತು.

ಇದರ ಬೆನ್ನಲ್ಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಕಳೆದ ಬಾರಿ ಜಾತಿ ಸಮೀಕ್ಷೆ 180 ಕೋಟಿ ಖರ್ಚಾಗಿತ್ತು. ಈ ಬಾರಿ ಮತ್ತೆ ಜಾತಿ ಸಮೀಕ್ಷೆ ಮಾಡಲು 300 ಕೋಟಿ ರೂ.ಗಳಷ್ಟು ಖರ್ಚು ನಿರೀಕ್ಷಿಸಲಾಗಿದೆ. ಇದರಿಂದ ಜನರ ತೆರಿಗೆ ದುಡ್ಡು ದಂಡ ಎಂದು ಜನರು ಕಿಡಿ ಕಾರುತ್ತಿದ್ದಾರೆ.

ಈ ಬಗ್ಗೆ ಇಂದು ಸಚಿವ ಸತೀಶ್ ಜಾರಕಿಹೊಳಿಯವರನ್ನು ಪ್ರಶ್ನಿಸಿದಾಗ ‘ಏನೂ ಮಾಡಕ್ಕಾಗಲ್ಲ. ಸ್ವಲ್ಪ ಖರ್ಚಾಗ್ತದೆ. ಆದರೆ ಕಳೆದ ಜಾತಿ ಗಣತಿ ವರದಿ ಹಲವು ಸಮುದಾಯಗಳಿಂದ ವಿರೋಧವಿತ್ತು. ನಮ್ಮ ಜನಸಂಖ್ಯೆ ಜಾಸ್ತಿಯಿದೆ ಎಂದಿದ್ದರು. ಹೀಗಾಗಿ ಈಗ ಮತ್ತೆ ಸ್ವಲ್ಪ ಖರ್ಚಾಗಬಹುದು. ಏನೂ ಮಾಡಕ್ಕಾಗಲ್ಲ. ಹೊಸದಾಗಿ ಜಾತಿ ಗಣತಿ ಮಾಡಬೇಕಾಗುತ್ತದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವ ಚಾನೆಲ್ ಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಹಾಕಿದ್ರೂ ಕೇಳೋನಲ್ಲ ನಾನು: ಸಿದ್ದರಾಮಯ್ಯ

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಎನ್ ರಾಮಚಂದರ್ ರಾವ್ ಹಿನ್ನೆಲೆ ಹೀಗಿದೆ

ಸರಣಿ ಹೃದಯಾಘಾತಕ್ಕೆ ಕೊವಿಡ್ ಲಸಿಕೆ ಕಾರಣವಾ: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಕೇಂದ್ರ ಸರ್ಕಾರದಿಂದಾಗಿ ದಿನಬಳಕೆ ವಸ್ತುಗಳಿಗೂ ಇನ್ನು ಝಡ್ ಪ್ಲಸ್ ಭದ್ರತೆ ಕೊಡಬೇಕು

ಕಾಂಗ್ರೆಸ್ ಅಧಿಕಾರ, ಮಾನಸಿಕ ಅಸ್ವಸ್ಥರಿಗೂ ಏನಾದರೂ ಸಂಬಂಧ ಇದೆಯೇ?: ಸಿ.ಟಿ.ರವಿ

ಮುಂದಿನ ಸುದ್ದಿ
Show comments